ಒಂದು ದೇಶದ ಒಂದು ಅನಿಲ ಸ್ಥಾವರ ಯೋಜನೆಯಡಿ ಪೈಪ್ಲೈನ್ ವಿಸ್ತರಣೆಗೆ ಆದ್ಯತೆ ನೀಡಲಾಗಿದೆ. ಅಗ್ಗದ ದರದಲ್ಲಿ ಪರಿಸರ ಸ್ನೇಹಿ ನೈಸರ್ಗಿಕ ಅನಿಲ ದೊರೆಯಲಿದ್ದು, ಕೈಗಾರಿಕೆ, ಗೃಹ ಬಳಕೆ, ಸಾರಿಗೆ ವ್ಯವಸ್ಥೆಯಲ್ಲಿ ಸ್ವಚ್ಛ ಇಂಧನ ಉಪಯೋಗ ಆಗಲಿದೆ. ಇದ ರಿಂದ ಪರಿಸರ ಮಾಲಿನ್ಯ ನಿಯಂತ್ರಣ ವಾಗಲಿದೆ. ಜನರ ಆರೋಗ್ಯವೂ ಸುಧಾರಿಸಲಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ. ದೇಶದ ಕರಾವಳಿಯಲ್ಲಿ ನೀಲಿ ಆರ್ಥಿಕ ತೆಗೆ ಉತ್ತೇಜನ ನೀಡುವ ಮೂಲಕ ಕಡಲ ತೀರದಲ್ಲಿ ವಾಸಿಸುವ ಮೀನು ಗಾರರ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ. ಮತ್ಸ್ಯ ಸಂಪತ್ತಿನ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಗುಣಮಟ್ಟದ ಸಂಸ್ಕರಿತ ಮತ್ಸ್ಯಾಹಾರದ ಹಬ್ ಆಗಿ ಭಾರತವನ್ನು ಅಭಿವೃದ್ಧಿಪಡಿಸಲು ರೂಪುರೇಷೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.