<p><strong>ಮಡಿಕೇರಿ: </strong>ಕೊಡಗು ಜಿಲ್ಲೆಯು ‘ಯೋಧರ ನಾಡು’ ಎಂದು ಕರೆಯಲ್ಪಡುತ್ತಿದ್ದು, ಈ ಖ್ಯಾತಿಗೆ ಮತ್ತೊಂದು ವಿಶೇಷ ಸೇರುತ್ತಿದೆ. ಅಪ್ರತಿಮ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಜನಿಸಿದ್ದ ಮಡಿಕೇರಿಯ ‘ಸನ್ನಿಸೈಡ್’ ನಿವಾಸವು ‘ಜನರಲ್ ತಿಮ್ಮಯ್ಯ ಸ್ಮಾರಕ ಭವನ’ವಾಗಿ ರೂಪುಗೊಂಡಿದೆ. ಜಾಗದ ಕೊರತೆ, ಅನುದಾನ ಸಮಸ್ಯೆಯಿಂದ ಕುಂಟುತ್ತಾ ಸಾಗಿದ್ದ ಕಾಮಗಾರಿಯು ಕೊನೆಗೂ ಪೂರ್ಣಗೊಂಡಿದ್ದು ಫೆ.6ರಂದು ಲೋಕಾರ್ಪಣೆ ಆಗುತ್ತಿದೆ.</p>.<p>ಮ್ಯೂಸಿಯಂ ಉದ್ಘಾಟನೆಗೆ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರೂ ಆಗಿರುವ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೇ ಮಡಿಕೇರಿಗೆ ಆಗಮಿಸುತ್ತಿದ್ದಾರೆ. ಅಂದು ಮಧ್ಯಾಹ್ನ 3.15ಕ್ಕೆ ಮ್ಯೂಸಿಯಂ ಉದ್ಘಾಟನೆಗೊಳ್ಳಲಿದೆ.</p>.<p>ಜನರಲ್ ತಿಮ್ಮಯ್ಯ ಅವರ ಬದುಕು, ಸಾಧನೆ, ದೇಶ ಸೇವೆಯು ಮ್ಯೂಸಿಯಂನಲ್ಲಿ ಅನಾವರಣಗೊಂಡಿದೆ. ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ’ ಸದಸ್ಯರ ಅವಿರತ ಪ್ರಯತ್ನದಿಂದ ಮ್ಯೂಸಿಯಂ ತಲೆಯೆತ್ತಿದೆ.</p>.<p>ರಾಜ್ಯ ಸರ್ಕಾರವು 2006ರಲ್ಲಿ ತಿಮ್ಮಯ್ಯ ಅವರ ನಿವಾಸವನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸುವ ಯೋಜನೆ ಪ್ರಕಟಿಸಿತ್ತು. ಆದರೆ, ತಿಮ್ಮಯ್ಯ ಅವರ ನಿವಾಸ ಪಕ್ಕದಲ್ಲಿಯೇ ಆರ್ಟಿಒ ವಸತಿ ಗೃಹವಿತ್ತು. ಆ ಜಾಗ ಪಡೆದುಕೊಳ್ಳಲು ಸಾಕಷ್ಟು ಕಸರತ್ತು ನಡೆಸಬೇಕಾಯಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಟಿಒಗೆ ಸೇರಿದ ಜಾಗವನ್ನು ಸ್ಮಾರಕಕ್ಕೆ ಬಿಟ್ಟು ಕೊಡಲಾಯಿತು. ಒಟ್ಟು 15 ವರ್ಷಗಳ ಹಿಂದೆ ಪ್ರಕಟಿಸಿದ್ದ ಯೋಜನೆಯು ಈಗ ಸಾಕಾರಗೊಂಡಿದೆ.</p>.<p><strong>ಯುದ್ಧ ಟ್ಯಾಂಕ್ ಆಕರ್ಷಣೆ:</strong><br />‘ಸನ್ನಿಸೈಡ್’ನಲ್ಲಿ ಯುದ್ಧ ಟ್ಯಾಂಕ್ ಆಕರ್ಷಣೆಯಲ್ಲಿ ಒಂದಾಗಿದೆ. ಪ್ರವೇಶ ದ್ವಾರದಲ್ಲಿಯೇ ಟ್ಯಾಂಕ್ ಇಡಲಾಗಿದೆ. ಮಹಾರಾಷ್ಟ್ರದ ಪುಣೆಯ ಕೀರ್ಕಿ ಸೇನಾ ಕೇಂದ್ರದಿಂದ ಸನ್ನಿಸೈಡ್ಗೆ ಎರಡು ವರ್ಷಗಳ ಹಿಂದೆ ತರಲಾಗಿತ್ತು. ಈ ಟ್ಯಾಂಕ್ 1971ರಲ್ಲಿ ಭಾರತ–ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ‘ಹಿಮತ್’ ಹೆಸರಿನಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಗೋಣಿಕೊಪ್ಪಲಿನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸೇನಾಧಿಕಾರಿಗಳು ಸ್ಮಾರಕಕ್ಕೆ ಯುದ್ಧ ಟ್ಯಾಂಕ್ ಕಳುಹಿಸುವ ಭರವಸೆ ನೀಡಿದ್ದರು. ಅದರಂತೆ ಯುದ್ಧ ಟ್ಯಾಂಕ್ ಬಂದಿತ್ತು.</p>.<p>ಹಳೆಯ ಮನೆಯನ್ನೇ ಯಥಾಸ್ಥಿತಿ ಕಾಪಾಡಿಕೊಂಡು, ಮ್ಯೂಸಿಯಂ ಅಭಿವೃದ್ಧಿ ಪಡಿಸಲಾಗಿದೆ. ತಿಮ್ಮಯ್ಯ ಅವರ ಹುಟ್ಟಿನಿಂದ ಅವರ ಬದುಕು-ಸಾಹಸ ಸಾಧನೆಗಳ ಯಶೋಗಾಥೆ ಬಿಂಬಿಸುವ ಪ್ರಯತ್ನ ಮಾಡಲಾಗಿದೆ ಎಂದು ಫೋರಂನ ಸದಸ್ಯರು ಮಾಹಿತಿ ನೀಡುತ್ತಾರೆ.</p>.<p>ಮನೆ ಒಳಭಾಗದ ವಿನ್ಯಾಸ ವಿವಿಧ ಬಗೆಯ ಆಯುಧಗಳು, ಭಾವಚಿತ್ರಗಳು ಗಮನ ಸೆಳೆಯಲಿದೆ. ಆಡಿಯೊ, ವಿಡಿಯೊ ಮೂಲಕದ ಮಾಹಿತಿಗಳೂ ಇಲ್ಲಿ ಲಭ್ಯವಾಗಲಿವೆ. ಸನ್ನಿಸೈಡ್ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.</p>.<p><strong>ಮಿಗ್ 21...</strong><br />ಮತ್ತೊಂದು ಆಕರ್ಷಣೆಯೆಂದರೆ ‘ಮಿಗ್ 21’ ಯುದ್ಧ ವಿಮಾನ. ಅದು ಸಹ ಸನ್ನಿಸೈಡ್ನಲ್ಲಿದೆ. ಈ ಯುದ್ಧ ವಿಮಾನವು 1971ರ ಭಾರತ –ಪಾಕ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 15 ವರ್ಷಗಳ ಹಿಂದೆಯೇ ಈ ವಿಮಾನವನ್ನು ಸೇವೆಯಿಂದ ಹೊರಗಿಡಲಾಗಿತ್ತು. ಈಗಿನ ಲೆಕ್ಕದಲ್ಲಿ ಅದಕ್ಕೆ ಅಂದಾಜು ₹ 40ರಿಂದ 45 ಲಕ್ಷ ಬೆಲೆಯಿದೆ. ಭಾರತೀಯ ಸೇನೆಯ ಯೋಧರು ಬಳಸಿದ 24 ಶಸ್ತ್ರಾಸ್ತ್ರಗಳ ಮ್ಯೂಸಿಯಂನಲ್ಲಿವೆ. ಫೆ.6ರ ಬಳಿಕ ಇವುಗಳನ್ನು ಸ್ಥಳೀಯರು, ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.</p>.<p>50ರಿಂದ 60 ವರ್ಷಗಳ ಹಿಂದಿನ ಲೈಟ್ ಮಿಷನ್ ಗನ್, ಮೀಡಿಯಂ ಮಿಷನ್ ಗನ್, ಸೆಲ್ಫ್ ಲೋಡಿಂಗ್ ರೈಫಲ್ಗಳು, 7.62 ಮತ್ತು 303 ಬ್ಯಾರಲ್ ರೈಫಲ್ಗಳು, ರಾಕೆಟ್ ಲಾಂಚರ್, 32 ಎಂ.ಎಂ ರೈಫಲ್, ಪಾಯಿಂಟ್ 38 ರೈಫಲ್ಗಳು ಮ್ಯೂಸಿಯಂನಲ್ಲಿವೆ. ಇವುಗಳನ್ನೂ ಹತ್ತಿರದಿಂದಲೇ ನೋಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ: </strong>ಕೊಡಗು ಜಿಲ್ಲೆಯು ‘ಯೋಧರ ನಾಡು’ ಎಂದು ಕರೆಯಲ್ಪಡುತ್ತಿದ್ದು, ಈ ಖ್ಯಾತಿಗೆ ಮತ್ತೊಂದು ವಿಶೇಷ ಸೇರುತ್ತಿದೆ. ಅಪ್ರತಿಮ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಜನಿಸಿದ್ದ ಮಡಿಕೇರಿಯ ‘ಸನ್ನಿಸೈಡ್’ ನಿವಾಸವು ‘ಜನರಲ್ ತಿಮ್ಮಯ್ಯ ಸ್ಮಾರಕ ಭವನ’ವಾಗಿ ರೂಪುಗೊಂಡಿದೆ. ಜಾಗದ ಕೊರತೆ, ಅನುದಾನ ಸಮಸ್ಯೆಯಿಂದ ಕುಂಟುತ್ತಾ ಸಾಗಿದ್ದ ಕಾಮಗಾರಿಯು ಕೊನೆಗೂ ಪೂರ್ಣಗೊಂಡಿದ್ದು ಫೆ.6ರಂದು ಲೋಕಾರ್ಪಣೆ ಆಗುತ್ತಿದೆ.</p>.<p>ಮ್ಯೂಸಿಯಂ ಉದ್ಘಾಟನೆಗೆ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರೂ ಆಗಿರುವ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೇ ಮಡಿಕೇರಿಗೆ ಆಗಮಿಸುತ್ತಿದ್ದಾರೆ. ಅಂದು ಮಧ್ಯಾಹ್ನ 3.15ಕ್ಕೆ ಮ್ಯೂಸಿಯಂ ಉದ್ಘಾಟನೆಗೊಳ್ಳಲಿದೆ.</p>.<p>ಜನರಲ್ ತಿಮ್ಮಯ್ಯ ಅವರ ಬದುಕು, ಸಾಧನೆ, ದೇಶ ಸೇವೆಯು ಮ್ಯೂಸಿಯಂನಲ್ಲಿ ಅನಾವರಣಗೊಂಡಿದೆ. ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ’ ಸದಸ್ಯರ ಅವಿರತ ಪ್ರಯತ್ನದಿಂದ ಮ್ಯೂಸಿಯಂ ತಲೆಯೆತ್ತಿದೆ.</p>.<p>ರಾಜ್ಯ ಸರ್ಕಾರವು 2006ರಲ್ಲಿ ತಿಮ್ಮಯ್ಯ ಅವರ ನಿವಾಸವನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸುವ ಯೋಜನೆ ಪ್ರಕಟಿಸಿತ್ತು. ಆದರೆ, ತಿಮ್ಮಯ್ಯ ಅವರ ನಿವಾಸ ಪಕ್ಕದಲ್ಲಿಯೇ ಆರ್ಟಿಒ ವಸತಿ ಗೃಹವಿತ್ತು. ಆ ಜಾಗ ಪಡೆದುಕೊಳ್ಳಲು ಸಾಕಷ್ಟು ಕಸರತ್ತು ನಡೆಸಬೇಕಾಯಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಟಿಒಗೆ ಸೇರಿದ ಜಾಗವನ್ನು ಸ್ಮಾರಕಕ್ಕೆ ಬಿಟ್ಟು ಕೊಡಲಾಯಿತು. ಒಟ್ಟು 15 ವರ್ಷಗಳ ಹಿಂದೆ ಪ್ರಕಟಿಸಿದ್ದ ಯೋಜನೆಯು ಈಗ ಸಾಕಾರಗೊಂಡಿದೆ.</p>.<p><strong>ಯುದ್ಧ ಟ್ಯಾಂಕ್ ಆಕರ್ಷಣೆ:</strong><br />‘ಸನ್ನಿಸೈಡ್’ನಲ್ಲಿ ಯುದ್ಧ ಟ್ಯಾಂಕ್ ಆಕರ್ಷಣೆಯಲ್ಲಿ ಒಂದಾಗಿದೆ. ಪ್ರವೇಶ ದ್ವಾರದಲ್ಲಿಯೇ ಟ್ಯಾಂಕ್ ಇಡಲಾಗಿದೆ. ಮಹಾರಾಷ್ಟ್ರದ ಪುಣೆಯ ಕೀರ್ಕಿ ಸೇನಾ ಕೇಂದ್ರದಿಂದ ಸನ್ನಿಸೈಡ್ಗೆ ಎರಡು ವರ್ಷಗಳ ಹಿಂದೆ ತರಲಾಗಿತ್ತು. ಈ ಟ್ಯಾಂಕ್ 1971ರಲ್ಲಿ ಭಾರತ–ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ‘ಹಿಮತ್’ ಹೆಸರಿನಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಗೋಣಿಕೊಪ್ಪಲಿನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸೇನಾಧಿಕಾರಿಗಳು ಸ್ಮಾರಕಕ್ಕೆ ಯುದ್ಧ ಟ್ಯಾಂಕ್ ಕಳುಹಿಸುವ ಭರವಸೆ ನೀಡಿದ್ದರು. ಅದರಂತೆ ಯುದ್ಧ ಟ್ಯಾಂಕ್ ಬಂದಿತ್ತು.</p>.<p>ಹಳೆಯ ಮನೆಯನ್ನೇ ಯಥಾಸ್ಥಿತಿ ಕಾಪಾಡಿಕೊಂಡು, ಮ್ಯೂಸಿಯಂ ಅಭಿವೃದ್ಧಿ ಪಡಿಸಲಾಗಿದೆ. ತಿಮ್ಮಯ್ಯ ಅವರ ಹುಟ್ಟಿನಿಂದ ಅವರ ಬದುಕು-ಸಾಹಸ ಸಾಧನೆಗಳ ಯಶೋಗಾಥೆ ಬಿಂಬಿಸುವ ಪ್ರಯತ್ನ ಮಾಡಲಾಗಿದೆ ಎಂದು ಫೋರಂನ ಸದಸ್ಯರು ಮಾಹಿತಿ ನೀಡುತ್ತಾರೆ.</p>.<p>ಮನೆ ಒಳಭಾಗದ ವಿನ್ಯಾಸ ವಿವಿಧ ಬಗೆಯ ಆಯುಧಗಳು, ಭಾವಚಿತ್ರಗಳು ಗಮನ ಸೆಳೆಯಲಿದೆ. ಆಡಿಯೊ, ವಿಡಿಯೊ ಮೂಲಕದ ಮಾಹಿತಿಗಳೂ ಇಲ್ಲಿ ಲಭ್ಯವಾಗಲಿವೆ. ಸನ್ನಿಸೈಡ್ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.</p>.<p><strong>ಮಿಗ್ 21...</strong><br />ಮತ್ತೊಂದು ಆಕರ್ಷಣೆಯೆಂದರೆ ‘ಮಿಗ್ 21’ ಯುದ್ಧ ವಿಮಾನ. ಅದು ಸಹ ಸನ್ನಿಸೈಡ್ನಲ್ಲಿದೆ. ಈ ಯುದ್ಧ ವಿಮಾನವು 1971ರ ಭಾರತ –ಪಾಕ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 15 ವರ್ಷಗಳ ಹಿಂದೆಯೇ ಈ ವಿಮಾನವನ್ನು ಸೇವೆಯಿಂದ ಹೊರಗಿಡಲಾಗಿತ್ತು. ಈಗಿನ ಲೆಕ್ಕದಲ್ಲಿ ಅದಕ್ಕೆ ಅಂದಾಜು ₹ 40ರಿಂದ 45 ಲಕ್ಷ ಬೆಲೆಯಿದೆ. ಭಾರತೀಯ ಸೇನೆಯ ಯೋಧರು ಬಳಸಿದ 24 ಶಸ್ತ್ರಾಸ್ತ್ರಗಳ ಮ್ಯೂಸಿಯಂನಲ್ಲಿವೆ. ಫೆ.6ರ ಬಳಿಕ ಇವುಗಳನ್ನು ಸ್ಥಳೀಯರು, ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.</p>.<p>50ರಿಂದ 60 ವರ್ಷಗಳ ಹಿಂದಿನ ಲೈಟ್ ಮಿಷನ್ ಗನ್, ಮೀಡಿಯಂ ಮಿಷನ್ ಗನ್, ಸೆಲ್ಫ್ ಲೋಡಿಂಗ್ ರೈಫಲ್ಗಳು, 7.62 ಮತ್ತು 303 ಬ್ಯಾರಲ್ ರೈಫಲ್ಗಳು, ರಾಕೆಟ್ ಲಾಂಚರ್, 32 ಎಂ.ಎಂ ರೈಫಲ್, ಪಾಯಿಂಟ್ 38 ರೈಫಲ್ಗಳು ಮ್ಯೂಸಿಯಂನಲ್ಲಿವೆ. ಇವುಗಳನ್ನೂ ಹತ್ತಿರದಿಂದಲೇ ನೋಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>