<p><strong>ಹುಣಸೂರು:</strong> ಇಲ್ಲಿನ ನಾಗರಹೊಳೆ ವೀರನಹೊಸಹಳ್ಳಿ ವಲಯದಿಂದ ಹೊರಬಂದ ಕಾಡಾನೆ ಹಿಂಡನ್ನು ಲಕ್ಷ್ಮಣತೀರ್ಥ ನದಿಯ ನಾಲೆ ಮೂಲಕ ಕಾಡಿಗೆ ಅಟ್ಟಲಾಗಿದೆ.</p>.<p>ನೀರು ಹರಿಯುತ್ತಿರುವ ನಾಲೆಯಲ್ಲಿ 6 ಕಾಡಾನೆಗಳು ಓಡುತ್ತಿರುವ ಹಾಗೂ ಗ್ರಾಮಸ್ಥರು ಜೋರಾಗಿ ಕೂಗುತ್ತಾ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆನೆಗಳು ನಾಲೆಯ ಏರಲು ಪ್ರಯತ್ನಿಸಿದ್ದು, ಸಾಧ್ಯವಾಗಿಲ್ಲ.</p>.<p>ಆನೆಗಳು ಕಾಡಿನಿಂದ ಹೊರಬಾರದಂತೆ ತಡೆಯಲು ಅರಣ್ಯ ಇಲಾಖೆ ರಾತ್ರಿ ಪಾಳಿಯಲ್ಲಿ 16 ಸಿಬ್ಬಂದಿ ನಿಯೋಜಿಸಿತ್ತು. ಆದರೆ, ಭಾನುವಾರ ಇವರ ಕಣ್ತಪ್ಪಿಸಿ 6 ಕಾಡಾನೆಗಳು ಗ್ರಾಮಗಳತ್ತ ನುಸುಳಿದ್ದವು.</p>.<p>ಗುರುಪುರ ಟಿಬೆಟ್ ಕ್ಯಾಂಪ್ ಮಾರ್ಗವಾಗಿ ಕಂದಕ ದಾಟಿ ಬಂದ ಕಾಡಾನೆಗಳು ಪಾಲ, ಕೂಡ್ಲೂರು, ತಟ್ಟೆಕೆರೆ, ಚೆನ್ನಸೋಗೆ ಭಾಗಗಳ ರೈತರ ಗದ್ದೆ, ತೋಟಗಳಲ್ಲಿನ ಬೆಳೆಗಳನ್ನು ನಾಶಪಡಿಸಿವೆ. ಬಹಳಷ್ಟು ಕಡೆ ಅಡಿಕೆ ಗಿಡಗಳನ್ನು ಹೊಸಕಿ ಹಾಕಿವೆ.</p>.<p>‘ಸೋಮವಾರ ನಸುಕಿನಿಂದಲೇ ಆನೆ ಓಡಿಸುವ ಕಾರ್ಯಾಚರಣೆ ನಡೆಸಲಾಯಿತು. ನಲ್ಲೂರು ಪಾಲ ನಾಲೆ ಮೂಲಕ ಆನೆಯನ್ನು ಗುರುಪುರ ಟಿಬೆಟ್ ಕ್ಯಾಂಪ್ ಮಾರ್ಗ ಅರಣ್ಯಕ್ಕೆ ಅಟ್ಟಲಾಗಿದೆ’ ಎಂದು ವೀರನಹೊಸಹಳ್ಳಿಯ ವಲಯ ಅರಣ್ಯಾಧಿಕಾರಿ ನಮನ ನಾರಾಯಣ ನಾಯಕ್ ತಿಳಿಸಿದರು.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಿಸಿಎಫ್ ಮಹೇಶ್ ಕುಮಾರ್, ‘ಎಲ್ಲ ಆನೆಗಳನ್ನು ಸುರಕ್ಷಿತವಾಗಿ ಕಾಡಿಗಟ್ಟಲಾಗಿದೆ. ಗುಂಪುಗೂಡಿದ್ದ ಗ್ರಾಮಸ್ಥರನ್ನು ಪೊಲೀಸರ ನೆರವಿನಿಂದ ಚದುರಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ಇಲ್ಲಿನ ನಾಗರಹೊಳೆ ವೀರನಹೊಸಹಳ್ಳಿ ವಲಯದಿಂದ ಹೊರಬಂದ ಕಾಡಾನೆ ಹಿಂಡನ್ನು ಲಕ್ಷ್ಮಣತೀರ್ಥ ನದಿಯ ನಾಲೆ ಮೂಲಕ ಕಾಡಿಗೆ ಅಟ್ಟಲಾಗಿದೆ.</p>.<p>ನೀರು ಹರಿಯುತ್ತಿರುವ ನಾಲೆಯಲ್ಲಿ 6 ಕಾಡಾನೆಗಳು ಓಡುತ್ತಿರುವ ಹಾಗೂ ಗ್ರಾಮಸ್ಥರು ಜೋರಾಗಿ ಕೂಗುತ್ತಾ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆನೆಗಳು ನಾಲೆಯ ಏರಲು ಪ್ರಯತ್ನಿಸಿದ್ದು, ಸಾಧ್ಯವಾಗಿಲ್ಲ.</p>.<p>ಆನೆಗಳು ಕಾಡಿನಿಂದ ಹೊರಬಾರದಂತೆ ತಡೆಯಲು ಅರಣ್ಯ ಇಲಾಖೆ ರಾತ್ರಿ ಪಾಳಿಯಲ್ಲಿ 16 ಸಿಬ್ಬಂದಿ ನಿಯೋಜಿಸಿತ್ತು. ಆದರೆ, ಭಾನುವಾರ ಇವರ ಕಣ್ತಪ್ಪಿಸಿ 6 ಕಾಡಾನೆಗಳು ಗ್ರಾಮಗಳತ್ತ ನುಸುಳಿದ್ದವು.</p>.<p>ಗುರುಪುರ ಟಿಬೆಟ್ ಕ್ಯಾಂಪ್ ಮಾರ್ಗವಾಗಿ ಕಂದಕ ದಾಟಿ ಬಂದ ಕಾಡಾನೆಗಳು ಪಾಲ, ಕೂಡ್ಲೂರು, ತಟ್ಟೆಕೆರೆ, ಚೆನ್ನಸೋಗೆ ಭಾಗಗಳ ರೈತರ ಗದ್ದೆ, ತೋಟಗಳಲ್ಲಿನ ಬೆಳೆಗಳನ್ನು ನಾಶಪಡಿಸಿವೆ. ಬಹಳಷ್ಟು ಕಡೆ ಅಡಿಕೆ ಗಿಡಗಳನ್ನು ಹೊಸಕಿ ಹಾಕಿವೆ.</p>.<p>‘ಸೋಮವಾರ ನಸುಕಿನಿಂದಲೇ ಆನೆ ಓಡಿಸುವ ಕಾರ್ಯಾಚರಣೆ ನಡೆಸಲಾಯಿತು. ನಲ್ಲೂರು ಪಾಲ ನಾಲೆ ಮೂಲಕ ಆನೆಯನ್ನು ಗುರುಪುರ ಟಿಬೆಟ್ ಕ್ಯಾಂಪ್ ಮಾರ್ಗ ಅರಣ್ಯಕ್ಕೆ ಅಟ್ಟಲಾಗಿದೆ’ ಎಂದು ವೀರನಹೊಸಹಳ್ಳಿಯ ವಲಯ ಅರಣ್ಯಾಧಿಕಾರಿ ನಮನ ನಾರಾಯಣ ನಾಯಕ್ ತಿಳಿಸಿದರು.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಿಸಿಎಫ್ ಮಹೇಶ್ ಕುಮಾರ್, ‘ಎಲ್ಲ ಆನೆಗಳನ್ನು ಸುರಕ್ಷಿತವಾಗಿ ಕಾಡಿಗಟ್ಟಲಾಗಿದೆ. ಗುಂಪುಗೂಡಿದ್ದ ಗ್ರಾಮಸ್ಥರನ್ನು ಪೊಲೀಸರ ನೆರವಿನಿಂದ ಚದುರಿಸಲಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>