‘ವಿನೂತನ ತಂತ್ರಜ್ಞಾನ, ಆವಿಷ್ಕಾರ, ನವೋದ್ಯಮ, ವಿದ್ಯುತ್ ವಾಹನ, ಸಂಶೋಧನೆ, ಅಭಿವೃದ್ಧಿ, ಜ್ಞಾನ ವಿನಿಮಯ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲು ನಮ್ಮ ಸರ್ಕಾರ ಆಸಕ್ತಿ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮ ನಿರ್ಭರ ಭಾರತ’ದ ಕನಸು ನನಸಾಗಿಸಲು ನಮ್ಮ ರಾಜ್ಯವು ಬದ್ಧವಾಗಿದೆ. ಹೀಗಾಗಿ ‘ಆತ್ಮ ನಿರ್ಭರ ಗುಜರಾತ್ನಿಂದ ಆತ್ಮ ನಿರ್ಭರ ಭಾರತ’ ಎಂಬ ಘೋಷ ವಾಕ್ಯದೊಂದಿಗೆ2022ರ ಜನವರಿಯಲ್ಲಿ ಜಾಗತಿಕ ಸಮ್ಮೇಳನ ನಡೆಸಲು ನಿರ್ಧರಿಸಿದ್ದೇವೆ’ ಎಂದರು.