ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕುಮಾರಸ್ವಾಮಿ ನಾಟಕವಾಡಿಕೊಂಡೇ, ಕಣ್ಣೀರು ಹಾಕಿಕೊಂಡೇ ಜನರಿಗೆ ಮೋಸ ಮಾಡುತ್ತಾರೆ. ಈಗ ಮಾಡುತ್ತಿರುವ ಜಲಧಾರೆ ಕಾರ್ಯಕ್ರಮ ಕೂಡ ಹೊಸ ನಾಟಕ. ಅವರು ಹುಟ್ಟಿದ್ದೇ ನಾಟಕದಲ್ಲಿ, ತಾವು ಹಾಳಾಗುವುದಲ್ಲದೇ ತಮ್ಮನ್ನು ನಂಬಿದವರನ್ನೂ ಹಾಳು ಮಾಡುತ್ತಿದ್ದಾರೆ. ಎಷ್ಟೋ ನಾಯಕರು ನಂಬಿ ಅವರನ್ನು ಬೆಳೆಸಿದ್ದಾರೆ, ಆದರೆ ಕುಮಾರಸ್ವಾಮಿಯವರು ಅವರೆಲ್ಲರಿಗೂ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.