ಶಿವಮೊಗ್ಗ/ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಕೊಪ್ಪ ಹಾಗೂ ಶಿವಮೊಗ್ಗ ಭಾಗದಲ್ಲಿ ರಾತ್ರಿ 10.20ರ ಸಮಯದಲ್ಲಿ ಭಾರಿ ಶಬ್ಧ ಕೇಳಿಸಿದ್ದು, ಕಂಪನದ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
'ಸ್ಫೋಟವಾದ ರೀತಿ ಜೋರು ಶಬ್ಧ ಇದ್ದಕ್ಕಿದ್ದಂತೆ ಕೇಳಿತು. ಕಂಪನದ ಅನುಭವವಾಯಿತು' ಎಂದು ಎನ್.ಆರ್.ಪುರ ನಿವಾಸಿ ನಾಗರಾಜ್ 'ಪ್ರಜಾವಾಣಿ'ಗೆ ತಿಳಿಸಿದರು. ಈ ಭಾಗದ ಹಲವು ಊರುಗಳಲ್ಲಿ ಶಬ್ಧ ಕೇಳಿಸಿದೆ. ಜನ ಬೆಚ್ಚಿದ್ದಾರೆ.
ಜೋರು ಶಬ್ಧ ಕೇಳಿದ ಕೂಡಲೇ ಜನರು ಮನೆಯಿಂದ ಹೊರ ಬಂದಿದ್ದಾರೆ.