ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯರಾಗಿ ವಾಣಿಜ್ಯ ತೆರಿಗೆ ಇಲಾಖೆಯ (ಆರ್ಥಿಕ ಗುಪ್ತಚರ ಘಟಕ) ಜಂಟಿ ಆಯುಕ್ತ ಎಚ್.ಜಿ. ಪವಿತ್ರ ಅವರನ್ನು ನೇಮಿಸಲಾಗಿದೆ.
ಅಧಿಕಾರ ವಿಭಾಗದಿಂದ ಪವಿತ್ರ ಅವರನ್ನು ನೇಮಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.
ಕೆಪಿಎಸ್ಸಿ ಸದಸ್ಯರಾಗಿದ್ದ ಶ್ರೀಕಾಂತ ರಾವ್ ಅವರು ಜುಲೈ 21ರಂದು ನಿವೃತ್ತರಾಗಿದ್ದರು. ಕೆಪಿಎಸ್ಸಿಯಲ್ಲಿ ಅಧ್ಯಕ್ಷ ಸೇರಿ ಒಟ್ಟು 14 ಸದಸ್ಯರಿದ್ದು, ಪವಿತ್ರ ಅವರ ನೇಮಕದಿಂದ ಎಲ್ಲ ಸ್ಥಾನಗಳು ಭರ್ತಿ ಆದಂತಾಗಿದೆ.