ನಿಯಮ ಅನುಷ್ಠಾನ ಸಂಬಂಧ ಸಮಗ್ರ ಮಧ್ಯಂತರ ನಿರ್ದೇಶನ ನೀಡುವ ಮೊದಲು ರಾಜ್ಯಕ್ಕೆ ಅಗತ್ಯ ಇರುವ ಶಬ್ಧ ಮಾಪನ ಸಾಧನಗಳ ಅಗತ್ಯವಿದೆ ಎಂಬ ವಿವರ ಬೇಕಾಗುತ್ತದೆ. ಹೀಗಾಗಿ ವರದಿ ಸಲ್ಲಿಸುವಂತೆ ಈ ಹಿಂದಿನ ವಿಚಾರಣೆ ವೇಳೆ ಪೀಠ ಕೇಳಿತ್ತು. ವರದಿ ಸಲ್ಲಿಸಿದ್ದ ಡಿಜಿಪಿ ಪ್ರವೀಣ್ ಸೂದ್ ಅವರು, ‘ರಾಜ್ಯದಲ್ಲಿ 143 ಡಿವೈಎಸ್ಪಿ ಮತ್ತು ಎಸಿಪಿಗಳಿದ್ದು, ತಲಾ ಒಂದರಂತೆ ಅಗತ್ಯಕ್ಕೆ ತಕ್ಕಷ್ಟು ಮಾಪನಗಳಿವೆ’ ಎಂದು ತಿಳಿಸಿದ್ದರು.