‘ಸುಗ್ರೀವಾಜ್ಞೆಯಲ್ಲಿನ ಸೆಕ್ಷನ್ 5ರ ಪ್ರಕಾರ ದನಗಳ ಸಾಗಣೆಗೆ ನಿರ್ಬಂಧ ಇದೆ. ಸೆಕ್ಷನ್ 13ರ ಪ್ರಕಾರ ಕೃಷಿಗೆ ಯೋಗ್ಯವಾದ ದನಗಳನ್ನು ಸಾಗಣೆ ಮಾಡುವ ರೈತರನ್ನು ಬಂಧಿಸಲೂ ಅವಕಾಶ ಇದೆ. ಆದರೆ, ಸುಗ್ರೀವಾಜ್ಞೆ ಅಡಿಯಲ್ಲಿ ರೂಪಿಸಲಾಗಿರುವ ನಿಯಮಾವಳಿಗಳು ಇನ್ನೂ ಜಾರಿಗೆ ಬಂದಿಲ್ಲ. ಹೀಗಾಗಿ, ಸುಗ್ರೀವಾಜ್ಞೆ ಅನುಷ್ಠಾನದ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.