‘ಸಮಾನತೆಗಾಗಿ ಸಮವಸ್ತ್ರ ನೀತಿ‘ ಎಂಬ ಸಚಿವ ಬಿ.ಸಿ.ನಾಗೇಶ್ ಹೇಳಿಕೆಗೆ, ‘ಮಕ್ಕಳ ಶುಲ್ಕದಲ್ಲಿ ಏಕೆ ಸಮಾನತೆ ತರುತ್ತಿಲ್ಲ? ಶಾಲೆಗೆ ಒಂದೊಂದು ವಾಹನದಲ್ಲಿ ಬರುತ್ತಾರೆ. ಪುಸ್ತಕಗಳನ್ನು ಬ್ಯಾಗ್, ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಬರುತ್ತಾರೆ. ಅಲ್ಲಿ ಸಮಾನತೆ ಇಲ್ಲ. ಹಿಜಾಬ್ ಧಾರಣೆ ಕಾನೂನು ಹಾಗೂ ಸಂವಿಧಾನ ವಿರೋಧಿಯಾಗಿದ್ದರೆ ಕ್ರಮ ಕೈಗೊಳ್ಳಲಿ‘ ಎಂದು ಸವಾಲು ಎಸೆದರು.