ಆರೋಪಿ ತನ್ನ ಸಹೋದರ, ಗೌರಿಬಿದನೂರು ತಾಲ್ಲೂಕಿನ ತರಿದಾಳು ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ರವಿಪ್ರಕಾಶ್ ಅವರಿಗೆ ಸಂಬಂಧಿಸಿದ ಕೆಲಸವೊಂದರ ವಿಚಾರವಾಗಿ ಮಾತನಾಡಲು ಮಂಚೇನಹಳ್ಳಿ ಪೊಲೀಸ್ ಠಾಣೆ ಎಸ್ಐ ಲಕ್ಷ್ಮೀನಾರಾಯಣ ಅವರಿಗೆ ಇತ್ತೀಚೆಗೆ ಕರೆ ಮಾಡಿ, ತಾನು ಗೃಹ ಸಚಿವರ ಸಹೋದರ ಮಹೇಶ್ ಬೊಮ್ಮಾಯಿ ಎಂದು ಪರಿಚಯಿಸಿಕೊಂಡು ರವಿಪ್ರಕಾಶ್ ಅವರ ಕೆಲಸ ಬೇಗ ಮಾಡಿ ಕೊಡುವಂತೆ ಒತ್ತಡ ಹಾಕಿದ್ದ ಎನ್ನಲಾಗಿದೆ.