ಮದ್ದೂರು: ‘ರಾಜ್ಯ ರಾಜಕಾರಣಕ್ಕೆ ಬರುವಂತೆ ಬಿಜೆಪಿ, ಕಾಂಗ್ರೆಸ್ ಆಹ್ವಾನಿಸಿದ್ದು, ನನ್ನ ಕಾರ್ಯ ಕರ್ತರ ಅಭಿಪ್ರಾಯ ಪಡೆದ ಬಳಿಕ ನಿರ್ಧರಿಸುವೆ’ ಎಂದು ಸಂಸದೆ ಸುಮಲತಾ ಅಂಬರೀಷ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಗೆ ಎಷ್ಟು ದಿನಗಳಿವೆ ಎಂಬುದ ಕ್ಕಿಂತಲೂ ಎಷ್ಟು ಅನುಕೂಲ ಕರ ವಾತಾವರಣವಿದೆ ಎಂಬುದು ಮುಖ್ಯ. ರಾಜ್ಯ ರಾಜಕಾರಣಕ್ಕೆ ಬರುವ ಮಾತನಾಡಲು ಇನ್ನೂ ಸಮಯ ಬಂದಿಲ್ಲ’ ಎಂದರು.
‘ದಶಪಥ ಹೆದ್ದಾರಿ ಉದ್ಘಾ ಟನೆ ಕಾರ್ಯಕ್ರಮದಲ್ಲಿ ಸಂಸದೆ ಯಾಗಿ ಭಾಗವಹಿಸುತ್ತೇನೆ ಅಷ್ಟೇ. ಜಿಲ್ಲೆಗೆ ವಿಶೇಷ ಅನುದಾನ ನೀಡುವಂತೆ ಪ್ರಧಾನಿಗೆ ಮನವಿ ಮಾಡುವೆ’ ಎಂದರು.