‘ಗುಜರಾತ್ ಪುತ್ರ ಎಂಬುದಾಗಿ ಬಿಂಬಿಸಿಕೊಂಡ ಮೋದಿ ಅವರನ್ನು ಅಲ್ಲಿಯ ಜನರು ಚುನಾವಣೆಯಲ್ಲಿ ಕೈಹಿಡಿದರು. ನಾನು ಕನ್ನಡಿಗನಾಗಿದ್ದು ಕಾಂಗ್ರೆಸ್ ಚುಕ್ಕಾಣಿ ಹಿಡಿದಿದ್ದೇನೆ. ಕರ್ನಾಟಕದ ಜನರು ರಾಜ್ಯದ ಪುತ್ರನೆಂಬಂತೆ ಪರಿಗಣಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಬೆಲೆ ಏರಿಕೆ ಅಂತ್ಯಗೊಳಿಸಲು, ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಲು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅಗತ್ಯವಿದೆ’ ಎಂದರು.