‘ಅನಾರೋಗ್ಯ ಮತ್ತು ಕೋವಿಡ್ ಸಂದರ್ಭ ಆಧರಿಸಿ ಜಾಮೀನು ನೀಡಬೇಕು’ ಎಂದು ಮನ್ಸೂರ್ ಖಾನ್ ಪರ ವಕೀಲರು ಮನವಿ ಮಾಡಿದರು. ‘ಜೈಲಿನಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು,ಸೋಂಕು ಹರಡುವ ಪ್ರಶ್ನೆಯೇ ಇಲ್ಲ. ಅನಾರೋಗ್ಯ ಇದ್ದರೆ ವೈದ್ಯರು ಚಿಕಿತ್ಸೆ ನೀಡುತ್ತಾರೆ’ ಎಂದು ವಿಶೇಷ ಅಭಿಯೋಜಕ (ಸಿಬಿಐ) ಕೆ. ಸುದರ್ಶನ್ ವಾದಿಸಿದರು.