ಮೈಸೂರು ಜಿಲ್ಲೆಯಲ್ಲಿ ಏಷ್ಯನ್ ಪೇಂಟ್ಸ್ ಭೂಮಿ ಬಿಟ್ಟುಕೊಟ್ಟವರಿಗೆ 70 ಜನರಿಗೆ ಉದ್ಯೋಗ ಕೊಡದಿದ್ದಾಗ, ಮುಂಬೈನಿಂದ ಕಂಪನಿಯವರನ್ನು ಕರೆಸಿದೆವು. ಮಾತುಕತೆ ನಡೆಸಿದ ಬಳಿಕ, 54 ಜನರಿಗೆ ಉದ್ಯೋಗ ನೀಡಿದರು. ಉಳಿದವರಿಗೆ ಉದ್ಯೋಗ ಕೊಡಿಸಲು ಕ್ರಮ ವಹಿಸಲಾಗಿದೆ. ಯಾರೇ ಆಗಲಿ ಷರತ್ತು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.