ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕಕ್ಯಪದವು ಮೈರ ‘ಸತ್ಯ– ಧರ್ಮ’ ಜೋಡುಕರೆ ಕಂಬಳ ದಲ್ಲಿ8.78 ಸೆಕೆಂಡ್ ನಲ್ಲಿ 100 ಮೀ. ಅಂತರವನ್ನು ಕ್ರಮಿಸಿ, ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ತನ್ನದೇ ಹೆಸರಿನಲ್ಲಿದ್ದ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ.
ಕಳೆದ ವಾರ ವೇಣೂರು– ಪೆರ್ಮುಡದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 8.96 ಸೆಕೆಂಡ್ನಲ್ಲಿ 100 ಮೀ. ಕ್ರಮಿಸುವ ಮೂಲಕ ದಾಖಲೆ ನಿರ್ಮಿಸಿದ್ದರು.
ಹಗ್ಗ ಹಿರಿಯ ವಿಭಾಗದ ಫೈನಲ್ನಲ್ಲಿ ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿ ‘ಎ’ ಕೋಣಗಳನ್ನು ಶ್ರೀನಿವಾಸ್ ಗೌಡ ಓಡಿಸಿದರು.
‘ಕಂಬಳಗಳಲ್ಲಿಈ ಹಿಂದೆ 125 ಮೀಟರ್ಗೆ ಸೆನ್ಸಾರ್ ಅಳವಡಿಸಿ, ಸಮಯ ದಾಖಲಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಮೈರ ಕಂಬಳದಲ್ಲಿ ಸೆನ್ಸಾರ್ ಅನ್ನು 100 ಮೀಟರ್ಗೆ ಅಳವಡಿಸಲಾಗಿದೆ’ ಎಂದು ಜಿಲ್ಲಾ ಕಂಬಳ ಸಮಿತಿ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ ತಿಳಿಸಿದ್ದಾರೆ.