‘ಉನ್ನತ ವೃತ್ತಿ ಶಿಕ್ಷಣದಲ್ಲಿ ಕನ್ನಡದ ಉತ್ತೇಜನದ ಪಠ್ಯ ರಚನೆಗೆ ವಿಶೇಷ ಘಟಕ ಸ್ಥಾಪಿಸಲು ₹100 ಕೋಟಿ ಮೀಸಲಿಡಬೇಕು. ಖಾಸಗಿ ಮತ್ತು ಸರ್ಕಾರಿ ರಂಗದಲ್ಲಿ ಕನ್ನಡಿಗರ ಔದ್ಯೋಗಿಕ ನೆಲೆಗಟ್ಟನ್ನು ಗಟ್ಟಿಗೊಳಿಸಲು ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಕನ್ನಡ ಮನ್ನಣೆ ಕೋಶ ಪ್ರಾರಂಭಿಸಬೇಕು. ಕೆಪಿಎಸ್ಸಿ ಮೂಲಕ ಕನ್ನಡದಲ್ಲಿ 100 ಅಂಕಗಳ ಕಡ್ಡಾಯ ಪರೀಕ್ಷೆ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಶೇ 90ರಷ್ಟು ಹುದ್ದೆಗಳನ್ನು ಮೀಸಲಿಡಬೇಕು’ ಎಂದು ಮಂಡಳಿಯ ಅಧ್ಯಕ್ಷ ಆರ್. ಎ. ಪ್ರಸಾದ್ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.