‘ಐದೂವರೆ ವರ್ಷಗಳ ಅವಧಿಯಲ್ಲಿ ಸರ್ಕಾರವು ₹ 39.47 ಕೋಟಿ ಅನುದಾನವನ್ನು ಪರಿಷತ್ತಿಗೆ ನೀಡಿದೆ. ಅಧಿಕಾರ ವಹಿಸಿಕೊಳ್ಳುವ ಮೊದಲು ₹ 4.45 ಕೋಟಿ ಮೊತ್ತ ಪರಿಷತ್ತಿನಲ್ಲಿತ್ತು.ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾಗೂ ಕನ್ನಡ ಸಮಾವೇಶಗಳ ಆಯೋಜನೆ, ಕನ್ನಡ ಭವನಗಳ ನಿರ್ಮಾಣ, ಸಿಬ್ಬಂದಿ ವೇತನ, ಜಿಲ್ಲಾ ಕಸಾಪ ನಿರ್ವಹಣೆ ಮತ್ತಿತರ ಚಟುವಟಿಕೆಗಳಿಗೆ ಹಣವನ್ನು ಖರ್ಚು ಮಾಡಲಾಗಿದೆ. ₹ 1.25 ಕೋಟಿ ಹಣ ಬಾಕಿ ಉಳಿದಿದೆ’ ಎಂದು ಮಾಹಿತಿ ನೀಡಿದರು.