ಕಲಬುರಗಿ: ‘ರಸ್ತೆ, ಚರಂಡಿಯಂತಹ ಸಣ್ಣ ವಿಷಯಗಳ ಬದಲು ಲವ್ ಜಿಹಾದ್ ಬಗ್ಗೆ ಮಾತನಾಡಲು ಮತ್ತು ಮತ ಕೇಳಲು ಹೇಳುತ್ತಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ನಾಲಾಯಕ್’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದರು.
‘2018 ರಲ್ಲಿದ್ದ ಬಿಜೆಪಿಯ ಹಿಂದುತ್ವ ಮತ್ತು ಭಾವನಾತ್ಮಕ ವಿಷಯಗಳ ಅಜೆಂಡಾ ಮುಂದಿನ ಚುನಾವಣೆಯಲ್ಲಿ ಫಲಿಸದು. ಭಾವನಾತ್ಮಕ ವಿಷಯಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ’ ಎಂದು ಮಂಗಳವಾರ ಹೇಳಿದರು.
‘ಬಿಜೆಪಿಯು ಬ್ರಿಟಿಷ್ ಜನತಾ ಪಾರ್ಟಿ ಇದ್ದಂತೆ. ಬಿಜೆಪಿಯವರು ಸಹ ಬ್ರಿಟಿಷರಂತೆ ವ್ಯವಹಾರ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಇಂಥ ಪಕ್ಷದಿಂದ ಎಂತಹ ಆಡಳಿತ ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.