‘ನನಗೆ ಕೋವಿಡ್ ದೃಢವಾಗಿದ್ದು,ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಟ್ವಿಟರ್ ಮೂಲಕ ಅಶೋಕ ಅವರು ಶುಕ್ರವಾರ ಮಧ್ಯಾಹ್ನ 2.50 ಕ್ಕೆ ಮನವಿ ಮಾಡಿದ್ದಾರೆ. ಈ ಮಾಹಿತಿ ಹೊರ ಬೀಳುತ್ತಿದ್ದಂತೆ, ಅವರ ಸಂಪರ್ಕಕ್ಕೆ ಬಂದಿದ್ದ ಮುಖ್ಯಮಂತ್ರಿ, ಆರೋಗ್ಯ ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಸಚಿವರು ಕೋವಿಡ್ ಪರೀಕ್ಷೆ ಮಾಡಿಸಿ, ಪ್ರತ್ಯೇಕವಾಸಕ್ಕೆ ಒಳಗಾಗಬೇಕಿತ್ತು. ಆದರೆ ಯಾರೂ ಪ್ರತ್ಯೇಕವಾಸಕ್ಕೆ ಮೊರೆ ಹೋದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸಚಿವ ಸುಧಾಕರ್ ಒಳಗೊಂಡಂತೆ ಕೆಲವು ಸಚಿವರು ಸಂಜೆಯವರೆಗೆ ವಿವಿಧ ಸಭೆಗಳನ್ನು ನಡೆಸಿದ್ದಾರೆ.