ಕೆಲವು ಜಿಲ್ಲೆಗಳ ನಗರ, ಗ್ರಾಮಾಂತರ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ 2,887 ಸಣ್ಣಪುಟ್ಟ ಗುಡಿ, ಕಟ್ಟೆಗಳನ್ನಷ್ಟೇ ತೆರವು ಮಾಡಲಾಗಿದೆ. ಆದರೆ, ದೊಡ್ಡ ಧಾರ್ಮಿಕ ಕೇಂದ್ರಗಳು ಹಾಗೂ ಬೃಹತ್ ಕಟ್ಟಡಗಳು ಇನ್ನೂ ಹಾಗೆಯೇ ಇವೆ. ಅತಿ ಹೆಚ್ಚು ಅನಧಿಕೃತ ಕಟ್ಟಡಗಳು ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿವೆ. ರಾಮ ನಗರ, ಕೊಡಗು, ದಾವಣಗೆರೆ ಜಿಲ್ಲೆಗಳಲ್ಲಿ ಅತಿ ಕಡಿಮೆ ಇವೆ. ಸಮೀಕ್ಷೆ ಪ್ರಕಾರ ಒಂದೇ ಒಂದು ಅಕ್ರಮ ಕಟ್ಟಡಗಳಿಲ್ಲದ ಬಳ್ಳಾರಿ ಜಿಲ್ಲೆಯಲ್ಲಿ, ಸುಪ್ರೀಂ ಕೋರ್ಟ್ ಆದೇಶದ ನಂತರವೇ 410 ಅಕ್ರಮ ಕಟ್ಟಗಳು ತಲೆ ಎತ್ತಿದ್ದವು. ಅವೆಲ್ಲವನ್ನೂ ಈಗ ತೆರವುಗೊಳಿಸಲಾಗಿದೆ. ಕೊಪ್ಪಳದಲ್ಲಿ ನಿರ್ಮಾಣವಾಗಿರುವ 262 ಕಟ್ಟಡಗಳಲ್ಲಿ 212 ತೆರವು ಮಾಡಲಾಗಿದೆ.