‘ಕೋವಿಡ್ನಿಂದ ಎರಡು ವರ್ಷ ಒಕ್ಕೂಟಗಳು ತೀವ್ರ ಸಮಸ್ಯೆಯಲ್ಲಿ ಸಿಲುಕಿದ್ದವು. ನಂತರ ದಿನಗಳಲ್ಲಿಯೂ ಹಾಲು ಸಂಗ್ರಹ ಪ್ರಮಾಣ ಕುಸಿದಿದೆ. ರೈತರು ಜಾನುವಾರುಗಳನ್ನು ಮಾರುತ್ತಿದ್ದಾರೆ. ದರ ಹೆಚ್ಚಳ ಅನಿವಾರ್ಯವಾಗಿದೆ’ ಎಂದು ರವಿ ಪ್ರತಿಪಾದಿಸಿದರು. ಅದಕ್ಕೆ ಸಚಿವರು, ‘ರೈತರಿಗೆ ಅನುಕೂಲ ಆಗಬೇಕು. ಗ್ರಾಹಕರ ಜೇಬಿಗೂ ಹೊರೆ ಆಗಬಾರದು. ಹೀಗಾಗಿ, ಈ ವಿಷಯದಲ್ಲಿ ಆದಷ್ಟು ಶೀಘ್ರದಲ್ಲಿ ಮುಖ್ಯಮಂತ್ರಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದರು.