‘ಈ ಮಾದರಿಯ ಮುಷ್ಕರಕ್ಕೆ ಸಂಘದ ಸಹಮತ ಇಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವಂತಹ ಇಂತಹ ಮುಷ್ಕರದ ಬದಲು ಕೆಲಸಕ್ಕೆ ಹಾಜರಾಗಿ, ವಿಶಿಷ್ಟವಾಗಿ ಹಾಗೂ ನಿರಂತರವಾಗಿ ಚಳವಳಿ ನಡೆಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.