‘2018ರಲ್ಲಿ ಚುನಾವಣಾ ಪ್ರಚಾರಕ್ಕೆ ನಾನು ಬರದಿದ್ದರೆ ಅಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಸಿ. ಪಾಟೀಲ ಸೋಲುತ್ತಿದ್ದರು. ಗೆದ್ದ ನಂತರ ನಿಮ್ಮನ್ನು ಬಿಟ್ಟು ಹೋಗಲ್ಲ ಎಂದಿದ್ದರು. ಆಪರೇಷನ್ ಕಮಲದಲ್ಲಿ ₹25 ಕೋಟಿ ಕೊಟ್ಟು ಬಿಜೆಪಿಯವರು ಪಾಟೀಲರನ್ನು ಖರೀದಿಸಿದರು. 2019ರ ಉಪಚುನಾವಣೆಯಲ್ಲಿ ₹40 ಕೋಟಿ ಖರ್ಚು ಮಾಡಿ, ಬಿಜೆಪಿಯಿಂದ ಗೆದ್ದು ಶಾಸಕರಾಗಿ, ಮಂತ್ರಿಯೂ ಆದರು. ದುಡ್ಡು ಹೊಡೆದು ದೊಡ್ಡವನಾದರೇ ಹೊರತು ಹಿರೇಕೆರೂರು ಅಭಿವೃದ್ದಿಗೆ ಏನೂ ಮಾಡಲಿಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.