‘ತೇರ್ಗಡೆಯಾಗಿರುವ ಎಲ್ಲ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿರುವ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ನೀಡಲು ಸದ್ಯಕ್ಕೆ ಅವಕಾಶಗಳಿಲ್ಲ. ಈ ಶೈಕ್ಷಣಿಕ ವರ್ಷಕ್ಕೆ ಸೀಮಿತವಾಗಿರುವಂತೆ ರಾಜ್ಯದಲ್ಲಿನ ಎಲ್ಲ ಸ್ವಾಯತ್ತ, ಸಂಯೋಜಿತ ಕಾಲೇಜುಗಳಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲ ಪದವಿ ಕೋರ್ಸ್ಗಳ ಪ್ರವೇಶಾತಿಗಾಗಿ ತಲಾ ಒಂದು ಹೆಚ್ಚುವರಿ ವಿಭಾಗ (ಸೆಕ್ಷನ್) ಪ್ರಾರಂಭಿಸಲು ಅನುಮತಿ ಕೊಡಬಹುದಾಗಿದೆ’ ಎಂದು ಅವರು ಶಿಫಾರಸು ಮಾಡಿದ್ದಾರೆ.