ಮಡಿಕೇರಿ: ‘ಪ್ರತಿಯೊಂದರಲ್ಲೂ ಹುಳುಕು ಹುಡುಕುವುದು ಕಾಂಗ್ರೆಸ್ನವರ ಮಾನಸಿಕ ಸ್ಥಿತಿಯಾಗಿದೆ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ಸೋಮವಾರ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿಲ್ಲ. ನೆಹರೂ ಭಾವಚಿತ್ರದ ವಿಷಯ ಆಧರಿಸಿ ರಾಜಕೀಯ ಮಾಡುತ್ತಿದೆ’ ಎಂದರು.
‘ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಶೇ 60ರಿಂದ 70ರಷ್ಟು ಜನರು ಸ್ವತಃ ತಮ್ಮ ಮನೆಗಳ ಮುಂದೆ ರಾಷ್ಟ್ರಧ್ವಜ ಹಾರಿಸಿದ್ದಾರೆ. ಇದರಿಂದ ದೇಶಕ್ಕೆ ಭವಿಷ್ಯ ಇದೆ ಎಂದೆನಿಸುತ್ತಿದೆ’ ಎಂದರು.