‘ಪ್ರಧಾನಿ ಮೋದಿ ಮಾದರಿಯ ಸೈದ್ಧಾಂತಿಕ ನೆಲಗಟ್ಟಿನ ಆಡಳಿತ, ಅಂತ್ಯೋದಯ ಕಾರ್ಯಕ್ರಮಗಳು, ಜನ ಮೆಚ್ಚುವ ಯೋಜನೆಗಳು ನಮ್ಮ ಸರ್ಕಾರದ ಆಡಳಿತದಲ್ಲಿ ಮೂಡಿ ಬರಬೇಕು. ಇಂದಿನ ಸರ್ಕಾರದ ಬೆಳವಣಿಗೆಗಳು, ನಿರ್ಧಾರಗಳು ಮತ್ತು ಪಕ್ಷದಲ್ಲಿನ ಚಟುವಟಿಕೆಗಳ ಕುರಿತಂತೆ ನಿಮ್ಮ ಮುಂದೆ ವಿಚಾರಗಳನ್ನು ಹಂಚಿಕೊಳ್ಳಬೇಕಾಗಿದೆ. ನಮ್ಮ ಸಲಹೆಗಳು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಮತ್ತು ಸರ್ಕಾರದ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಹಕಾರಿಯಾಗಲಿದೆ’ ಎಂದು ಅವರು ಹೇಳಿದ್ದಾರೆ.