ಕೆಎನ್ಎನ್ಎಲ್ ಧಾರವಾಡ ವಿಭಾಗದ ಮುಖ್ಯ ಲೆಕ್ಕಾಧಿಕಾರಿ ಎಸ್.ಎನ್. ವರದರಾಜು, ಅದೇ ಕಚೇರಿಯ ಲೆಕ್ಕ ಅಧೀಕ್ಷಕರಾದ ಡಿ.ಸಿ. ಶೀಲಾ ಮತ್ತು ವಿನಾಯಕ ಅರ್ಕಸಾಲಿ, ಪ್ರಥಮ ದರ್ಜೆ ಲೆಕ್ಕ ಸಹಾಯಕರಾದ ಅನಿಲ್ ಜಾಧವ್ ಮತ್ತು ಶರಣಪ್ಪ ಅಮಾನತುಗೊಂಡವರು. ಇದೇ ಅಕ್ರಮದಲ್ಲಿ ಭಾಗಿಯಾಗಿ, ಪ್ರಸ್ತುತ ಜಲಸಂಪನ್ಮೂಲ ಇಲಾಖೆಯಿಂದ ವರ್ಗಾವಣೆಗೊಂಡು ಸದ್ಯ ಬೆಳಗಾವಿ ಸ್ಮಾರ್ಟ್ ಸಿಟಿ ಮುಖ್ಯ ಹಣಕಾಸು ಅಧಿಕಾರಿಯಾಗಿರುವ ಎಂ.ಎಂ. ಮಿರ್ಜಾ, ಜಮಖಂಡಿಯಲ್ಲಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ (ಕಾಡಾ) ಲೆಕ್ಕಪರಿಶೋಧಕರಾಗಿರುವ ದೀಪಕ್ ಎ. ಮೂಡಲಗಿ ಅವರನ್ನು ಅಮಾನತು ಮಾಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಲಾಗಿದೆ.