‘ರಾಜ್ಯದ ವಿಚಾರಕ್ಕೆ ಬಂದಾಗ, ಬೆಂಗಳೂರು ಮತ್ತು ಹಳೇ ಮೈಸೂರು ಭಾಗಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ಕಾಣಿಸುತ್ತದೆ. ಕಲ್ಯಾಣ ಕರ್ನಾಟಕಕ್ಕೆ ಮತ್ತಷ್ಟು ಆದ್ಯತೆ ಕೊಡಬೇಕು ಎನಿಸುತ್ತದೆ. ಕೇಂದ್ರ ಸರ್ಕಾರದ ದೃಷ್ಟಿಕೋನದಲ್ಲಿ ನೋಡಿದಾಗ ಬಿಹಾರ, ಉತ್ತರ ಪ್ರದೇಶ ಹಿಂದುಳಿದಿವೆ ಎಂಬುದು ಗೋಚರವಾಗುತ್ತದೆ. ಇದು ಮಾಧುಸ್ವಾಮಿ ಮಾತಿನಲ್ಲಿ ಕಂಡ ವಿರೋಧಾಭಾಸ’ ಎಂದರು.