‘ಬಿಳಿಯ ಬಣ್ಣದ ಸೀರೆಯ ಸಂಕೇತದಲ್ಲೂ ಸ್ಟಷ್ಟತೆಯಿಲ್ಲ. ನಾಡದೇವಿಯ ಶರೀರ ಅಂಗಾಗಗಳ ರಚನೆಯಲ್ಲಿಯೂ ಪ್ರಬುದ್ಧತೆ ಇಲ್ಲ.ಕೈಗಳ ರಚನೆಯಲ್ಲಿ ಒಂದು ಕೈ ಕೆಳಗೆ, ಇನ್ನೊಂದು ಕೈ ಮೇಲೆ ಇದೆ. ಸಾಂಪ್ರದಾಯಿಕ ಚಿತ್ರರಚನಾ ತಂತ್ರ, ಕೌಶಲವನ್ನು ಅನುಸರಿಸಿಲ್ಲ. ನಾಡದೇವಿಯ ಕಾಲುಗಳು ಮರೆಯಾಗಿವೆ. ಕರ್ನಾಟಕ ನಕಾಶೆಯ ತಳಕ್ಕೆ (ಕೇರಳ ರಾಜ್ಯದ ಬಳಿ) ಸಮುದ್ರ ಅಲೆಗಳ ರಚನೆಯಿರುವುದು ವಾಸ್ತವಿಕತೆಗೆ ದೂರವಾಗಿದೆ. ಕೇರಳ ಭಾಗವನ್ನು ನಾಡದೇವಿ ಒಳಗೊಳ್ಳುವುದು ಆ ರಾಜ್ಯದ ಆಕ್ಷೇಪಕ್ಕೆ ಕಾರಣವಾಗಬಹುದು’ ಎಂದು ತಿಳಿಸಿದ್ದಾರೆ.