‘ಉಕ್ಕು, ಸಿಮೆಂಟ್, ಖಾದ್ಯ ತೈಲದ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತೇವೆ. ಕಲ್ಯಾಣ ಮಂಟಪಗಳಲ್ಲಿ 2 ದಿನ ಮದುವೆ ನಡೆಸಲು ₹3 ಲಕ್ಷದಿಂದ ₹5 ಲಕ್ಷ ಆಗುತ್ತದೆ. ಈ ರೀತಿ ದುಬಾರಿ ಆಗಿದ್ದು, ಅವುಗಳ ಮೇಲೆ ಸರ್ಕಾರಕ್ಕೆ ಕಡಿವಾಣ ಇಲ್ಲವೆ, ಕಣ್ಣು ಮುಚ್ಚಿ ಕುಳಿತಿದೆಯೇ. ಈ ಸ್ಥಿತಿ ತಂದವರು ನಾವೇ (ಕಾಂಗ್ರೆಸ್,ಬಿಜೆಪಿ ಜೆಡಿಎಸ್) ಅಲ್ಲವೇ? ರಾಜಕಾರಣಿಗಳು ತಮ್ಮ ಮಕ್ಕಳನ್ನು ಅರಮನೆ ಬಿಟ್ಟು ಬೇರೆ ಕಡೆ ಮದುವೆ ಮಾಡುವುದು ತಮ್ಮ ಗೌರವಕ್ಕೆ ಧಕ್ಕೆ ಎಂಬ ಭಾವನೆ ಬೆಳೆಸಿಕೊಂಡಿಲ್ಲವೆ’ ಎಂದು ರಮೇಶ್ಕುಮಾರ್ ಪ್ರಶ್ನಿಸಿದರು.