ಬೆಳಗಿನ ವಾಯುವಿಹಾರ ಮುಗಿಸಿ ಪೂಜಾ ಕೈಂಕರ್ಯ ನೆರವೇರಿಸುವುದು ಶರಣರ ನಿತ್ಯದ ಕಾಯಕ. ಶುಕ್ರವಾರ ನಸುಕಿನಲ್ಲಿ ಜೈಲು ಸೇರಿದ್ದ ಅವರ ಬಳಿ ಇಷ್ಟಲಿಂಗ ಪೂಜೆಗೆ ಅಗತ್ಯ ಇರುವ ಸಾಮಗ್ರಿ ಇರಲಿಲ್ಲ. ಮುರುಘಾಶ್ರೀ ಅವರ ಸಹಾಯಕ ಕರಿಬಸಪ್ಪ ಎಂಬುವರು ಪೂಜಾ ಸಮಾಗ್ರಿಗಳೊಂದಿಗೆ ಬೆಳಿಗ್ಗೆ 9.30ಕ್ಕೆ ಹೊರರೋಗಿ ಘಟಕದ ಬಳಿ ಬಂದಿದ್ದರು. ವೈದ್ಯರು ಆರೋಗ್ಯ ಪರೀಕ್ಷೆ ನಡೆಸುತ್ತಿದ್ದರಿಂದ ಪೊಲಿಸರು ಇದಕ್ಕೆ ಅವಕಾಶ ನೀಡಲಿಲ್ಲ.