‘ಕ್ರಾಂತಿವೀರನಿಗೆ ಜಯಂತಿಯ ದಿನದಂದೇ ತವರಿನಲ್ಲೇ ದೊಡ್ಡ ಅವಮಾನವಾಗಿದೆ. ಪ್ರತಿಮೆ ಪ್ರತಿಷ್ಠಾಪಿಸಲು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಪ್ರತಿಮೆಯನ್ನು ಪೊಲೀಸರು ತೆರವುಗೊಳಿಸಿ ಒಯ್ದಿದ್ದಾರೆ. ಇದರ ಹಿಂದೆ ಯಾರ ಕುತಂತ್ರವಿದೆ ಎನ್ನುವುದು ಗೊತ್ತಿಲ್ಲ. ಈ ಮೂಲಕ ದೇಶಪ್ರೇಮಿಗೆ ಅವಮಾನ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿರಲಿಲ್ಲ’ ಎಂದು ದೂರಿದರು. ‘ಹೀಗಾಗಿ, ನಾವೇ ಪ್ರತಿಷ್ಠಾಪಿಸಲು ಮುಂದಾದೆವು’ ಎಂದು ತಿಳಿಸಿದರು.