ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಅಪ್ಪನ ನಂತರ ಮಗ, ನಂತರ ಮೊಮ್ಮಗ ಹೀಗೆ ಟವೆಲ್ ಹಾಕುತ್ತಾರೆ. ಅನುಕಂಪ ಸೃಷ್ಟಿಸಿ ಗೆದ್ದೂ ಬರುತ್ತಾರೆ. ಆದರೆ, ಜನಸೇವೆ ಮಾಡುವುದಿಲ್ಲ. ಉದ್ಯೋಗ ಬೇಕು ಎಂದು ರಾಜಕೀಯಕ್ಕೆ ಬರಬೇಕಾ? ಅವಕಾಶ ಸಿಕ್ಕಾಗ ಜನಸೇವೆ ಮಾಡುವ ಜವಾಬ್ದಾರಿ ನಿರ್ವಹಿಸಬೇಕಾ’ ಎಂದು ಪ್ರಶ್ನಿಸಿದರು.