ಕೊರೊನಾ ಲಾಕ್ಡೌನ್ ಆರಂಭದಿಂದಲೇ ಫೇಸ್ಬುಕ್ ಲೈವ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಪ್ರಜಾವಾಣಿ ಈಗ ಸರಣಿ ಚಿಂತನ ಮಾಲೆಯೊಂದನ್ನು ಆಯೋಜಿಸುತ್ತಿದೆ. ‘ಕೊರೋನಾ ಕಾಡಿದ ಸಮಯ, ಆಗಿದ್ದು - ಆಗಬೇಕಾದ್ದು’ ಎಂಬ ಶೀರ್ಷಿಕೆಯಡಿ 10 ದಿನಗಳ ಕಾಲ ನಡೆಯಲಿರುವ ಈ ಚಿಂತನ ಮಾಲೆ ಜೂನ್ 18ರಿಂದ ಪ್ರತಿ ದಿನ ಸಂಜೆ 6ರಿಂದ 7 ಗಂಟೆಯ ವರೆಗೆ ಪ್ರಸಾರವಾಗಲಿದೆ. (ಪ್ರಸಾರವಾಗಲಿರುವ ಫೇಸ್ಬುಕ್ ಪುಟ fb.com/prajavani.net )
ಕಾರ್ಯಕ್ರಮದ ವಿವರ ಹೀಗಿದೆ;
ಶುಕ್ರವಾರ, 18ನೇ ಜೂನ್
ಖ್ಯಾತ ರಂಗ ನಿರ್ದೇಶಕಿ, ಚಲನಚಿತ್ರ ನಟಿ ಹಾಗೂ ಗಾಯಕಿ
ಬಿ.ಜಯಶ್ರೀ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ವಿಶ್ರಾಂತ ರಾಜ್ಯ ಸಭೆ ಸದಸ್ಯೆ
ಸೋಲಿಸ ಬ್ಯಾಡ, ಗೆಲಿಸಯ್ಯ- (ರಂಗ ಭೂಮಿ)
***
ಶನಿವಾರ, 19 ನೇ ಜೂನ್
ಪ್ರತಿಭಾ ಪ್ರಹ್ಲಾದ್
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಅಂತರರಾಷ್ಟ್ರೀಯನೃತ್ಯ ಕಲಾವಿದೆ ಹಾಗೂ ಮುಖ್ಯ ಸಂಘಟಕಿ, ದೆಹಲಿ ಅಂತರರಾಷ್ಟ್ರೀಯ ಕಲಾ ಉತ್ಸವ
ಶಾಸ್ತ್ರೀಯ ಕಲೆಗಳ ತಹತಹ
*** ಭಾನುವಾರ, 20 ನೇ ಜೂನ್
ಐ.ಎಂ.ವಿಠಲ ಮೂರ್ತಿ. I.A.S. (ನಿವೃತ್ತ), ವಿಶ್ರಾಂತ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ಮೂರು ಪ್ರಶಸ್ತಿ ಪುರಸ್ಕೃತ ಕನ್ನಡ ಚಲನಚಿತ್ರಗಳ ಗೌರವ ನಿರ್ಮಾಣ ಸಲಹೆಗಾರರು
ಆಡಳಿತ ಮತ್ತು ದಕ್ಷತೆ
***
ಸೋಮವಾರ, 21 ನೇ ಜೂನ್
ಡಾ. ಪುರುಷೋತ್ತಮ ಬಿಳಿಮಲೆ ಮುಖ್ಯಸ್ಥರು, ಜೆ. ಎನ್.ಯು. ಕನ್ನಡ ಪೀಠ, ನವದೆಹಲಿ (ವಿಶ್ರಾಂತ)
ಸಾಹಿತಿ ಮತ್ತು ಸಾಹಿತ್ಯ
*** ಮಂಗಳವಾರ, 22ನೇ ಜೂನ್
ಪ್ರೊ.ಹಿ.ಚಿ.ಬೋರಲಿಂಗಯ್ಯ ವಿಶ್ರಾಂತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಜನಪದ ತಜ್ಞರು
ಅನಾಥರಾದ ಜಾನಪದ ಕಲಾವಿದರು
*** ಬುಧವಾರ, 23 ನೇ ಜೂನ್
ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಕವಿಗಳು ಹಾಗೂ ಪ್ರಗತಿಪರ ಚಿಂತಕರು
ಶೋಷಿತರ ಸಂಕಟಗಳು
***
ಗುರುವಾರ, 24 ನೇ ಜೂನ್
ಪ್ರೊ.ಚಂದನ್ ಗೌಡ ಪ್ರಾಧ್ಯಾಪಕರು ಶ್ರೀ ರಾಮಕೃಷ್ಣ ಹೆಗಡೆ ಪೀಠ, ISEC, ಬೆಂಗಳೂರು.
ಸಾಮಾಜಿಕ ತಲ್ಲಣಗಳು
***
ಶುಕ್ರವಾರ, 25ನೇ ಜೂನ್
ಡಾ. ನಿರಂಜನಾರಾಧ್ಯ ವಿ.ಪಿ. ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಹರಿಕಾರ
ನತದೃಷ್ಟ ಶಾಲಾ ಮಕ್ಕಳು
*** ಶನಿವಾರ, 26 ನೇ ಜೂನ್
ಬಿ. ಸುರೇಶ ಚಲನಚಿತ್ರ, ಕಿರುಚಿತ್ರ- ನಟ, ನಿರ್ದೇಶಕ ಮತ್ತು ನಿರ್ಮಾಪಕ.
ಬಣ್ಣ ಕಳಚಿದ ಚಿತ್ರ / ಕಿರುತೆರೆ ಕಲಾವಿದರು
***
ಭಾನುವಾರ, 27 ನೇ ಜೂನ್
ಎನ್.ಮನು ಚಕ್ರವರ್ತಿ ಸಮಾಜ ಚಿಂತಕರು
ಆಗಿದ್ದು- ಆಗಬೇಕಾದ್ದು
***
ನೇರ ಪ್ರಸಾರದ ಸಮಯ: ಪ್ರತಿ ದಿನ ಸಂಜೆ 6 ರಿಂದ 7
(ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಅವರ ಸಂಯೋಜನೆಯಲ್ಲಿ ಈ ಸರಣಿ ಚಿಂತನ ಮಾಲೆ ಮೂಡಿಬರಲಿದೆ)