<p><strong>ಬೆಂಗಳೂರು:</strong> ‘ಪ್ರಜಾವಾಣಿ’ಆಶ್ರಯದಲ್ಲಿ ನಡೆಯುತ್ತಿರುವ ಆನ್ಲೈನ್ ಕ್ವಿಜ್ ಚಾಂಪಿಯನ್ಷಿಪ್ನ ಬೆಂಗಳೂರು ವಲಯ ಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿದ ದಕ್ಷ್ ಶೆಟ್ಟರ್, ಇದೇ 20ರಂದು ನಡೆಯುವ ರಾಜ್ಯಮಟ್ಟದ ‘ಗ್ರ್ಯಾಂಡ್ ಫಿನಾಲೆ’ಗೆ ಅರ್ಹತೆ ಗಳಿಸಿದ್ದಾರೆ.</p>.<p>ಬೆಂಗಳೂರು ವಲಯ ಮಟ್ಟದ ಫೈನಲ್ ಸ್ಪರ್ಧೆಯು ಶುಕ್ರವಾರ ಸಂಜೆ 6 ರಿಂದ 7.30ರ ವರೆಗೆ ಝೂಮ್ ಆ್ಯಪ್ ಮೂಲಕ ನಡೆದಿತ್ತು. ಇದರಲ್ಲಿ ಆರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಇವರ ಪೈಕಿ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಹೇಳಿದಆರ್.ಟಿ.ನಗರದ ಪ್ರೆಸಿಡೆನ್ಸಿ ಶಾಲೆಯ ದಕ್ಷ್ ಶೆಟ್ಟರ್ ಮೊದಲ ಸ್ಥಾನ ಪಡೆದರು.</p>.<p>ರ್ಯಾನ್ ಇಂಟರ್ನ್ಯಾಷನಲ್ ಶಾಲೆಯ ಸ್ಪರ್ಶ್ ಪ್ರದೀಪ್ ಜೈನ್ ಹಾಗೂ ಅಚೀವ್ ಸ್ಕೂಲ್ ಆಫ್ ಎಜುಕೇಷನ್ನ ಶೌರ್ಯ ವಿ.ಅಭಿಮನ್ಯು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.</p>.<p>ಪ್ರಾಥಮಿಕ ಸುತ್ತಿನ ಸ್ಪರ್ಧೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಆರು ಮಂದಿ ವಲಯ ಮಟ್ಟದ ಫೈನಲ್ ಪ್ರವೇಶಿಸಿದ್ದರು.</p>.<p>ಆನ್ಲೈನ್ ಮೂಲಕ ನಡೆಯುವ ‘ಗ್ರ್ಯಾಂಡ್ ಫಿನಾಲೆ’ಯಲ್ಲಿ ರಾಜ್ಯದ ಏಳು ವಲಯಗಳಿಂದ ಆಯ್ಕೆಯಾಗಿರುವ ಏಳು ವಿದ್ಯಾರ್ಥಿಗಳು ಪೈಪೋಟಿ ನಡೆಸಲಿದ್ದಾರೆ. ಮೊದಲ ಮೂರು ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹25 ಸಾವಿರ, ₹15 ಸಾವಿರ ಮತ್ತು ₹10 ಸಾವಿರ ನಗದು ಬಹುಮಾನ ದೊರೆಯಲಿದೆ.</p>.<p><strong>ಬೆಂಗಳೂರು ವಲಯ ಮಟ್ಟದ ವಿಜೇತರು</strong></p>.<p><strong>ಹೆಸರು; ಶಾಲೆ; ತರಗತಿ; ಜಿಲ್ಲೆ</strong></p>.<p>ದಕ್ಷ್ ಶೆಟ್ಟರ್, ಪ್ರೆಸಿಡೆನ್ಸಿ ಶಾಲೆ ಆರ್.ಟಿ.ನಗರ, 10, ಬೆಂಗಳೂರು ನಗರ</p>.<p>ಸ್ಪರ್ಶ್ ಪ್ರದೀಪ್ ಜೈನ್, ರ್ಯಾನ್ ಇಂಟರ್ನ್ಯಾಷನಲ್ ಶಾಲೆ, 9, ಬೆಂಗಳೂರು ನಗರ</p>.<p>ಶೌರ್ಯ ವಿ.ಅಭಿಮನ್ಯು, ಅಚೀವ್ ಸ್ಕೂಲ್ ಆಫ್ ಎಜುಕೇಷನ್, 5, ಬೆಂಗಳೂರು ನಗರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪ್ರಜಾವಾಣಿ’ಆಶ್ರಯದಲ್ಲಿ ನಡೆಯುತ್ತಿರುವ ಆನ್ಲೈನ್ ಕ್ವಿಜ್ ಚಾಂಪಿಯನ್ಷಿಪ್ನ ಬೆಂಗಳೂರು ವಲಯ ಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿದ ದಕ್ಷ್ ಶೆಟ್ಟರ್, ಇದೇ 20ರಂದು ನಡೆಯುವ ರಾಜ್ಯಮಟ್ಟದ ‘ಗ್ರ್ಯಾಂಡ್ ಫಿನಾಲೆ’ಗೆ ಅರ್ಹತೆ ಗಳಿಸಿದ್ದಾರೆ.</p>.<p>ಬೆಂಗಳೂರು ವಲಯ ಮಟ್ಟದ ಫೈನಲ್ ಸ್ಪರ್ಧೆಯು ಶುಕ್ರವಾರ ಸಂಜೆ 6 ರಿಂದ 7.30ರ ವರೆಗೆ ಝೂಮ್ ಆ್ಯಪ್ ಮೂಲಕ ನಡೆದಿತ್ತು. ಇದರಲ್ಲಿ ಆರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಇವರ ಪೈಕಿ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಹೇಳಿದಆರ್.ಟಿ.ನಗರದ ಪ್ರೆಸಿಡೆನ್ಸಿ ಶಾಲೆಯ ದಕ್ಷ್ ಶೆಟ್ಟರ್ ಮೊದಲ ಸ್ಥಾನ ಪಡೆದರು.</p>.<p>ರ್ಯಾನ್ ಇಂಟರ್ನ್ಯಾಷನಲ್ ಶಾಲೆಯ ಸ್ಪರ್ಶ್ ಪ್ರದೀಪ್ ಜೈನ್ ಹಾಗೂ ಅಚೀವ್ ಸ್ಕೂಲ್ ಆಫ್ ಎಜುಕೇಷನ್ನ ಶೌರ್ಯ ವಿ.ಅಭಿಮನ್ಯು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.</p>.<p>ಪ್ರಾಥಮಿಕ ಸುತ್ತಿನ ಸ್ಪರ್ಧೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಆರು ಮಂದಿ ವಲಯ ಮಟ್ಟದ ಫೈನಲ್ ಪ್ರವೇಶಿಸಿದ್ದರು.</p>.<p>ಆನ್ಲೈನ್ ಮೂಲಕ ನಡೆಯುವ ‘ಗ್ರ್ಯಾಂಡ್ ಫಿನಾಲೆ’ಯಲ್ಲಿ ರಾಜ್ಯದ ಏಳು ವಲಯಗಳಿಂದ ಆಯ್ಕೆಯಾಗಿರುವ ಏಳು ವಿದ್ಯಾರ್ಥಿಗಳು ಪೈಪೋಟಿ ನಡೆಸಲಿದ್ದಾರೆ. ಮೊದಲ ಮೂರು ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹25 ಸಾವಿರ, ₹15 ಸಾವಿರ ಮತ್ತು ₹10 ಸಾವಿರ ನಗದು ಬಹುಮಾನ ದೊರೆಯಲಿದೆ.</p>.<p><strong>ಬೆಂಗಳೂರು ವಲಯ ಮಟ್ಟದ ವಿಜೇತರು</strong></p>.<p><strong>ಹೆಸರು; ಶಾಲೆ; ತರಗತಿ; ಜಿಲ್ಲೆ</strong></p>.<p>ದಕ್ಷ್ ಶೆಟ್ಟರ್, ಪ್ರೆಸಿಡೆನ್ಸಿ ಶಾಲೆ ಆರ್.ಟಿ.ನಗರ, 10, ಬೆಂಗಳೂರು ನಗರ</p>.<p>ಸ್ಪರ್ಶ್ ಪ್ರದೀಪ್ ಜೈನ್, ರ್ಯಾನ್ ಇಂಟರ್ನ್ಯಾಷನಲ್ ಶಾಲೆ, 9, ಬೆಂಗಳೂರು ನಗರ</p>.<p>ಶೌರ್ಯ ವಿ.ಅಭಿಮನ್ಯು, ಅಚೀವ್ ಸ್ಕೂಲ್ ಆಫ್ ಎಜುಕೇಷನ್, 5, ಬೆಂಗಳೂರು ನಗರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>