‘ಪ್ರಕರಣವೊಂದರಲ್ಲಿ ಜೈಲು ಸೇರಿರುವ ಸೈಯದ್ ಅಲಿಯಾಸ್ ರಿಯಾಜ್, ಅಜ್ಮತ್ ಉಲ್ಲಾ, ಸೈಯದ್ ಸಮೀರ್, ರಿಯಾಜ್ ಹಾಗೂ ಸೈಯದ್ ಇಮ್ರಾನ್ ಗುಂಪು ಕಟ್ಟಿಕೊಂಡು, ಇನ್ನೊಬ್ಬ ಕೈದಿ ಅಮರ್ ಅಲಿಯಾಸ್ ಅಮರನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಬಗ್ಗೆ ಕಾರಾಗೃಹದ ಮುಖ್ಯ ಅಧೀಕ್ಷಕ ವಿ. ಶೇಷಮೂರ್ತಿ ದೂರು ನೀಡಿದ್ದು, ಅದರನ್ವಯ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.