‘ರಂಗಭೂಮಿ, ಚಲನಚಿತ್ರ, ಕಿರುತೆರೆ ಹಾಗೂ ಧಾರವಾಡ ಆಕಾಶವಾಣಿಯ ಬಿ–ಹೈ ದರ್ಜೆಯ ನಾಟಕ ಕಲಾವಿದನಾಗಿ ಕಳೆದ 60 ವರ್ಷ ಸೇವೆ ಸಲ್ಲಿಸಿದ್ದೇನೆ. ಏಣಗಿ ಬಾಳಪ್ಪನವರ ಕಂಪನಿ, ಸುಳ್ಳದ ದೇಸಾಯಿಯವರ ಕಂಪನಿ, ವೀರೇಶ್ವರ ನಾಟ್ಯ ಸಂಘ ಗುಡಗೇರಿ ಕಂಪನಿ, ಚಿತ್ತರಗಿ, ಕಮತಗಿ ಕಂಪನಿ ಸೇರಿದಂತೆ ಅನೇಕ ಕಂಪನಿಯಲ್ಲಿ ಕೆಲಸ ಮಾಡಿ, ರಂಗಭೂಮಿ ಸೇವೆ ಮಾಡಿದ್ದೇನೆ. ಈವರೆಗೂ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದರೂ ಪರಿಗಣಿಸದೇ ಇರುವುದು ನೋವು ತಂದಿದೆ’ ಎಂದು ಗದ್ಗಧಿತರಾದರು.