‘ಇಲಾಖೆ ಮಾನ್ಯತೆ ನೀಡುವಾಗ ಶಾಲೆಯಲ್ಲಿ ಮಕ್ಕಳು, ಪೀಠೋಪಕರಣ, ಶಿಕ್ಷಕರು ಇತ್ಯಾದಿ ವ್ಯವಸ್ಥೆಗಳು ಇರಲೇ ಬೇಕೆಂಬ ನಿಯಮಗಳನ್ನು ಕಡ್ಡಾಯ ಮಾಡಿದೆ. ಹೊಸ ಶಾಲೆಗಾಗಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿಕೊಂಡಿರುವ ಸಾವಿರಾರು ಶಾಲೆಗಳು ಹಾಗೂ ಆ ಶಾಲೆಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಈಗ ಆತಂಕಕ್ಕೀಡಾಗುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಎರಡು ವರ್ಷಗಳಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರು ತಾವು ನಡೆದಿದ್ದೇ ದಾರಿ ಎಂಬಂತೆ ಇಂಥ ಅನೇಕ ಗೊಂದಲಗಳನ್ನು ಸೃಷ್ಟಿಸಿ, ನಗೆಪಾಟಲಿಗೀಡಾಗುತ್ತಿದ್ದಾರೆ’ ಎಂದಿದ್ದಾರೆ.