<p><strong>ಮೈಸೂರು</strong>: ‘ಕಾಂಗ್ರೆಸ್ನ ಇಡೀ ಗಾಂಧಿ ವಂಶವೇ ಒಟ್ಟಾದರೂ ಆರ್ಎಸ್ಎಸ್ನ ಒಂದು ಕೂದಲನ್ನೂ ಅಲುಗಾಡಿಸಲು ಆಗಲಿಲ್ಲ. ಈ ಸಿದ್ದರಾಮಯ್ಯ ಏನು ಮಾಡಿಕೊಳ್ಳುತ್ತಾರೆ?’ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಕೇಳಿದರು.</p>.<p>ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಆ ಮನುಷ್ಯ ಮುಸ್ಲಿಮರನ್ನು ತೃಪ್ತಿಪಡಿಸಲು ಹೇಳಿಕೆ ಕೊಡುತ್ತಾರಷ್ಟೆ. ಆರ್ಎಸ್ಎಸ್ ಇರದಿದ್ದರೆ ಈ ದೇಶ ಎಲ್ಲಿರುತ್ತಿತ್ತು? ಹಗುರವಾದ ಮಾತುಗಳಿಂದ ಸಿದ್ದರಾಮಯ್ಯಗೆ ಈಗಾಗಲೇ ನೆಲೆ ಇಲ್ಲ; ಬೆಲೆಯೂ ಹೋಗುತ್ತದೆ’ ಎಂದು ಟೀಕಿಸಿದರು.</p>.<p>‘ಬಿಜೆಪಿಯು ಆರ್ಎಸ್ಎಸ್ನ ದೇಶ ಭಕ್ತ ಕೂಸು’ ಎಂದು ಪ್ರತಿಪಾದಿಸಿದರು.</p>.<p>‘ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಫ್ಲೆಕ್ಸ್ ಹರಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿರುವುದು ಗೂಂಡಾಗಿರಿಯ ಹೇಳಿಕೆಯಾಗಿದೆ. ಫ್ಲೆಕ್ಸ್ ಹರಿಯುವ ಸಂಸ್ಕೃತಿ ಬಿಜೆಪಿಯದ್ದಲ್ಲ. ರಾಜ್ಯದಲ್ಲಿ ಗಂಡಸರು ಅವರೊಬ್ಬರೇನಾ? ನಾವು ನಮ್ಮ ವೀರ ವನಿತೆಯರಿಂದ ಉತ್ತರ ಕೊಡಿಸುತ್ತೇವೆ’ ಎಂದು ಗುಡುಗಿದರು.</p>.<p>‘ಭಾರತ ಒಡೆದಿದ್ದೇ ಕಾಂಗ್ರೆಸ್. ಈಗ ಜೋಡಿಸುವ ಮಾತನಾಡುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಅನ್ನು ಕರ್ನಾಟಕದಲ್ಲೂ ಹುಡುಕಬೇಕಾಗುತ್ತದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಮೊದಲು ಪಕ್ಷವನ್ನು ಜೋಡಿಸಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.</p>.<p>‘ದಿಢೀರನೆ ಪಕ್ಷ ಸಂಘಟನೆಗೆ ಇಳಿದಿದ್ದೀರಲ್ಲಾ’ ಎಂಬ ಪ್ರಶ್ನೆಗೆ ಗರಂ ಆದ ಈಶ್ವರಪ್ಪ, ‘ಕುಡಿದವರಂತೆ ಪ್ರಶ್ನೆ ಕೇಳಿದರೆ ಉತ್ತರಿಸುವುದಿಲ್ಲ. ಸಿದ್ದರಾಮಯ್ಯ ಗಾಳಿ ಬೀಸಿದರೆ ಮಾತ್ರ ಇಂಥ ಪ್ರಶ್ನೆ ಬರುತ್ತದೆ’ ಎಂದು ಸಿಡಿಮಿಡಿಗೊಂಡರು.</p>.<p>‘ಸಚಿವ ಸ್ಥಾನ ಬರುತ್ತದೆ; ಹೋಗುತ್ತದೆ. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕೊನೆಯ ಉಸಿರಿರುವವರೆಗೂ ಬಿಜೆಪಿ ತೊರೆಯುವುದಿಲ್ಲ. ಪಕ್ಷದ ಹಿತದೃಷ್ಟಿಯಿಂದ ಅಹಿಂದ ಸಮಾವೇಶಕ್ಕೆ ಮುಂದಾಗಿದ್ದೇನೆಯೇ ಹೊರತು ವೈಯುಕ್ತಿಕ ಹಿತಾಸಕ್ತಿಗಾಗಿ ಅಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಕಾಂಗ್ರೆಸ್ನ ಇಡೀ ಗಾಂಧಿ ವಂಶವೇ ಒಟ್ಟಾದರೂ ಆರ್ಎಸ್ಎಸ್ನ ಒಂದು ಕೂದಲನ್ನೂ ಅಲುಗಾಡಿಸಲು ಆಗಲಿಲ್ಲ. ಈ ಸಿದ್ದರಾಮಯ್ಯ ಏನು ಮಾಡಿಕೊಳ್ಳುತ್ತಾರೆ?’ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಕೇಳಿದರು.</p>.<p>ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಆ ಮನುಷ್ಯ ಮುಸ್ಲಿಮರನ್ನು ತೃಪ್ತಿಪಡಿಸಲು ಹೇಳಿಕೆ ಕೊಡುತ್ತಾರಷ್ಟೆ. ಆರ್ಎಸ್ಎಸ್ ಇರದಿದ್ದರೆ ಈ ದೇಶ ಎಲ್ಲಿರುತ್ತಿತ್ತು? ಹಗುರವಾದ ಮಾತುಗಳಿಂದ ಸಿದ್ದರಾಮಯ್ಯಗೆ ಈಗಾಗಲೇ ನೆಲೆ ಇಲ್ಲ; ಬೆಲೆಯೂ ಹೋಗುತ್ತದೆ’ ಎಂದು ಟೀಕಿಸಿದರು.</p>.<p>‘ಬಿಜೆಪಿಯು ಆರ್ಎಸ್ಎಸ್ನ ದೇಶ ಭಕ್ತ ಕೂಸು’ ಎಂದು ಪ್ರತಿಪಾದಿಸಿದರು.</p>.<p>‘ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಫ್ಲೆಕ್ಸ್ ಹರಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿರುವುದು ಗೂಂಡಾಗಿರಿಯ ಹೇಳಿಕೆಯಾಗಿದೆ. ಫ್ಲೆಕ್ಸ್ ಹರಿಯುವ ಸಂಸ್ಕೃತಿ ಬಿಜೆಪಿಯದ್ದಲ್ಲ. ರಾಜ್ಯದಲ್ಲಿ ಗಂಡಸರು ಅವರೊಬ್ಬರೇನಾ? ನಾವು ನಮ್ಮ ವೀರ ವನಿತೆಯರಿಂದ ಉತ್ತರ ಕೊಡಿಸುತ್ತೇವೆ’ ಎಂದು ಗುಡುಗಿದರು.</p>.<p>‘ಭಾರತ ಒಡೆದಿದ್ದೇ ಕಾಂಗ್ರೆಸ್. ಈಗ ಜೋಡಿಸುವ ಮಾತನಾಡುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಅನ್ನು ಕರ್ನಾಟಕದಲ್ಲೂ ಹುಡುಕಬೇಕಾಗುತ್ತದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಮೊದಲು ಪಕ್ಷವನ್ನು ಜೋಡಿಸಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.</p>.<p>‘ದಿಢೀರನೆ ಪಕ್ಷ ಸಂಘಟನೆಗೆ ಇಳಿದಿದ್ದೀರಲ್ಲಾ’ ಎಂಬ ಪ್ರಶ್ನೆಗೆ ಗರಂ ಆದ ಈಶ್ವರಪ್ಪ, ‘ಕುಡಿದವರಂತೆ ಪ್ರಶ್ನೆ ಕೇಳಿದರೆ ಉತ್ತರಿಸುವುದಿಲ್ಲ. ಸಿದ್ದರಾಮಯ್ಯ ಗಾಳಿ ಬೀಸಿದರೆ ಮಾತ್ರ ಇಂಥ ಪ್ರಶ್ನೆ ಬರುತ್ತದೆ’ ಎಂದು ಸಿಡಿಮಿಡಿಗೊಂಡರು.</p>.<p>‘ಸಚಿವ ಸ್ಥಾನ ಬರುತ್ತದೆ; ಹೋಗುತ್ತದೆ. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕೊನೆಯ ಉಸಿರಿರುವವರೆಗೂ ಬಿಜೆಪಿ ತೊರೆಯುವುದಿಲ್ಲ. ಪಕ್ಷದ ಹಿತದೃಷ್ಟಿಯಿಂದ ಅಹಿಂದ ಸಮಾವೇಶಕ್ಕೆ ಮುಂದಾಗಿದ್ದೇನೆಯೇ ಹೊರತು ವೈಯುಕ್ತಿಕ ಹಿತಾಸಕ್ತಿಗಾಗಿ ಅಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>