ಈ ಕುರಿತು ದೇರ್ಲ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ, ‘ಮೇಲ್ನೋಟಕ್ಕೆ ನನ್ನ ಕನಸು ಪ್ರಕಾಶನದ ಯಾವುದೇ ಪುಸ್ತಕ ಆಯ್ಕೆ ಆದಂತೆ ಕಾಣಿಸುವುದಿಲ್ಲ. ನನ್ನ ಐದು ಕೃತಿಗಳ ಪೈಕಿ ಒಂದು ಕೃತಿಗೆ (ನೆಲಮುಖಿ) ಕರ್ನಾಟಕ ಸಾಹಿತ್ಯ ಅಕಾಡಮಿಯ ಬಹುಮಾನ ಬಂದಿದೆ. ಗ್ರಂಥಾಲಯ ಇಲಾಖೆಯ ಸಚಿವ ಸುರೇಶ್ ಕುಮಾರ್ ಅವರ ಮನೆಯಲ್ಲೂ ನನ್ನ ಒಂದೆರಡು ಪುಸ್ತಕಗಳು ಇವೆ. ಕನಸು ನನ್ನದೇ ಪುಟ್ಟ ಪ್ರಕಾಶನ. ನನ್ನದು ಎಡ ಬಲ ಅಲ್ಲದ ಈ ನೆಲ, ನೀರು, ಅನ್ನದ ಸತ್ಯ ಹೇಳುವ ಸರಳ ಕೃತಿಗಳು. ತಾಂತ್ರಿಕ ಕಾರಣವೋ, ಉದ್ದೇಶರ್ವಕವೋ ಗೊತ್ತಿಲ್ಲ....’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.