ಹಾವೇರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಹಾಯಕ ಎಂಜಿನಿಯರ್ ಕೃಷ್ಣ ಕೇಶಪ್ಪ ಆರೇರ ಅವರ ಬಸವೇಶ್ವರ ನಗರ ಬಿ ಬ್ಲಾಕ್ನ 16ನೇ ಕ್ರಾಸ್ನಲ್ಲಿರುವ ಸ್ವಂತ ಮನೆ ಅಂದಾಜು ಒಂದೂವರೆ ಕೋಟಿ ಮೌಲ್ಯದ್ದಾಗಿದೆ. ಈ ಮನೆಯಲ್ಲಿ476 ಗ್ರಾಂ ಚಿನ್ನಾಭರಣ, ಎರಡು ಮುಕ್ಕಾಲು ಕೆ.ಜಿ. ಬೆಳ್ಳಿ, ₹2.29 ಲಕ್ಷ ನಗದು ಸಿಕ್ಕಿದೆ. ಹಾವೇರಿ ನಗರದಲ್ಲಿ 1 ನಿವೇಶನ, ಸ್ವಗ್ರಾಮ ಡೊಳ್ಳೇಶ್ವರದಲ್ಲಿ 12 ಎಕರೆ ಹೊಲ ಮತ್ತು ತೋಟವನ್ನು ಕೃಷ್ಣ ಹೊಂದಿದ್ದಾರೆ. ಸ್ವಗ್ರಾಮದಲ್ಲಿರುವ ಸಹೋದರರ ಮನೆಗಳ ಮೇಲೂ ದಾಳಿ ನಡೆದಿದ್ದು, ₹6 ಲಕ್ಷ ನಗದು, 180 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.