ಸರ್ಕಾರಿ ವಕೀಲರು ವಾದಿಸಿ, 'ಸ್ಯಾಂಟ್ರೊ ರವಿ ಈ ಪ್ರಕರಣ ಮಾತ್ರವಲ್ಲದೇ, ಹಲವಾರು ಕೃತ್ಯಗಳಲ್ಲಿ ಭಾಗಿಯಾದ ಆರೋಪವಿದೆ. ಎಲ್ಲವನ್ನೂ ಒಗ್ಗೂಡಿಸಿ ಸಿಐಡಿ ತನಿಖೆಗೆ ಒಳಪಡಿಸಲು ಸರ್ಕಾರ ಆಲೋಚಿಸುತ್ತಿದೆ. ಬಂಧನದ ಬಳಿಕ ಆತನ ವಿಚಾರಣೆಗೆ ಹೆಚ್ಚು ಕಾಲಾವಕಾಶ ದೊರೆತಿಲ್ಲ. ಅತ್ಯಾಚಾರದಂತಹ ಗಂಭೀರ ಪ್ರಕರಣ ಇದಾಗಿದ್ದು, ಪೊಲೀಸ್ ತನಿಖೆಗೆ ಆತ ಅವಶ್ಯ. ಈ ಹಂತದಲ್ಲಿ ಯಾವುದೇ ಜಾಮೀನು ನೀಡಬಾರದು' ಎಂದು ಕೋರಿದರು.