‘ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಪ್ರಾಸಬದ್ಧವಾಗಿ ಸಿಟಿಯನ್ನು ಲೂಟಿ ಎನ್ನುವುದಾದರೆ ಸಿದ್ದುವನ್ನು ಪೆದ್ದು ಅನ್ನಬಹುದಲ್ಲ. ಆದರೆ, ನಮಗೆ ಸಂಸ್ಕೃತಿ ಇದೆ. ಸಾರ್ವಜನಿಕ ಜೀವನದಲ್ಲಿ ಆರೋಪಗಳನ್ನು ಮಾಡುವಾಗ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕು. ನನ್ನ ಬಗ್ಗೆ ಲೂಟಿ ಪದ ಬಳಕೆ ಮಾಡುವ ಇವರು ಸತ್ಯಹರಿಶ್ಚಂದ್ರನ ಮಕ್ಕಳಾ? ನನ್ನ ಬಗ್ಗೆ ಮಾತನಾಡುತ್ತಿರುವ ಇವರು ಬೇರೆಯವರ ಬಗ್ಗೆ ಮಾತನಾಡಲಿ ನೋಡೋಣ? ನಾನು ಹೇಳಬೇಕಾಗಿದ್ದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ’ ಎಂದು ರವಿ ತಿಳಿಸಿದರು.