ಇಂತಹ ಆರೋಪಗಳು ಬಂದಾಗ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿದರೆ ದಾಖಲೆಗಳನ್ನು ತಿದ್ದುವ ಸಾಧ್ಯತೆ ಇರುತ್ತದೆ. ರಾಜೀನಾಮೆ ಕೊಡುವಂತೆ ಅವರ ಪಕ್ಷದವರೇ ಒತ್ತಡ ಹಾಕಲಿದ್ದಾರೆ. ಕೆಳಗಿಳಿಸುವ ಸಂಚು ಅವರ ಪಕ್ಷದಲ್ಲೇ ನಡೆದಿದೆ. ಕತ್ತಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಯತ್ನಾಳ್ ಅವರ ವಿರುದ್ಧ ಧ್ವನಿ ಎತ್ತಿದ್ದಾರೆ. ಹೊಸ ಪಕ್ಷ ಕಟ್ಟುವ ಸೂಚನೆಗಳು ಹೊರ ಬೀಳುತ್ತಿವೆ. ಸಂಕ್ರಮಣದ ನಂತರ ಹೊಸ ಸುದ್ದಿ ಜನರಿಗೆ ದೊರಕಲಿದೆ ಎಂದರು.