ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, 2008ರಲ್ಲೇ ಮಂಜೂರು ಮಾಡಿದರೂ, ಈ ತನಕ ಹಂಚಿಕೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿತು. ‘ಕಡತ ಕಾಣೆಯಾಗಿದೆ ಎಂಬ ಬಿಡಿಎ ಅಧಿಕಾರಿಗಳ ನೆಪ ಆಘಾತಕಾರಿ. ಬಿಡಿಎ ಮಾಡಿರುವ ತಪ್ಪಿಗೆ ಆಟಗಾರ್ತಿಯನ್ನು ದೂಷಿಸಲು ಆಗುವುದಿಲ್ಲ. ಏಕ ಸದಸ್ಯ ಪೀಠದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಪೀಠ ತಿಳಿಸಿತು.