‘ಗ್ರಾಮದ ರಸ್ತೆ ವಿಚಾರವಾಗಿ ಆರು ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಕೋಪಗೊಂಡು ಸ್ವಜಾತಿ (ಲಿಂಗಾಯತರು) ಮುಖಂಡರಾದ ಗೌಡಿಕೆ ಪುಟ್ಟಸ್ವಾಮಿ, ಮರಿಸ್ವಾಮಿ, ಪುಟ್ಟಬುದ್ದಿ ಎಂಬುವವರು ನಮ್ಮ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದ ಅಂಗಡಿಗಳಲ್ಲಿ ನಾವು ಖರೀದಿ ಮಾಡುವಂತಿಲ್ಲ. ನಮ್ಮ ಜಮೀನುಗಳಿಗೆ ಗ್ರಾಮದ ಯಾರೂ ಕೆಲಸಕ್ಕೆ ಬರುವಂತಿಲ್ಲ. ದೇವಾಲಯಗಳಿಗೆ ನಾವು ಪ್ರವೇಶಿಸುವಂತಿಲ್ಲ. ಗ್ರಾಮಸ್ಥರು ನಮ್ಮನ್ನು ಮಾತನಾಡಿಸುವಂತಿಲ್ಲಎಂದು ತಾಕೀತು ಮಾಡಿದ್ದಾರೆ‘ ಎಂದು ಗುರುಮಲ್ಲಪ್ಪ ದೂರಿನಲ್ಲಿ ತಿಳಿಸಿದ್ದಾರೆ.