ಅರ್ಜಿದಾರ ಎ.ಕೆ.ಸಿದ್ದಲಿಂಗಪ್ಪ ಅವರು 1976ರ ಅಕ್ಟೋಬರ್ನಲ್ಲಿ ಬ್ಯಾಂಕ್ಗೆ ಗುಮಾಸ್ತರಾಗಿ ಸೇರಿದ್ದರು. ಸ್ಟೇಷನರಿ ಖರೀದಿ ಅಕ್ರಮದ ವಿಷಯದಲ್ಲಿ 2012ರಲ್ಲಿ ಶೋಕಾಸ್ ನೋಟಿಸ್ ಅನ್ನು ಬ್ಯಾಂಕ್ ನೀಡಿತ್ತು. ಅಂಗವೈಕಲ್ಯದ ಕಾರಣಕ್ಕೆ ಸಮರ್ಥನೆ ನೀಡಲು ಸಹಾಯಕರನ್ನು ನೇಮಿಸಬೇಕೆಂದು ವಿಚಾರಣಾಧಿಕಾರಿ ಮುಂದೆ ಅವರು ಮನವಿ ಮಾಡಿದ್ದರು. ಅದಕ್ಕೆ ಅವಕಾಶ ನೀಡದ ವಿಚಾರಣಾಧಿಕಾರಿ, ಅರ್ಜಿದಾರ ತಪ್ಪಿತಸ್ಥ ಎಂದು ತೀರ್ಮಾನಿಸಿತು. ಬಳಿಕ ಅವರು ನಿವೃತ್ತರಾದರು.