ದೇಶದಲ್ಲಿ ಈಗ ಕರ್ನಾಟಕದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚು ಇದ್ದರೂ, ನಿಯಂತ್ರಣಕ್ಕೆ ಬರುತ್ತಿದೆ. ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಪ್ರಧಾನಿಯವರೇ ನನ್ನೊಂದಿಗೆ ಮಾತನಾಡಿ, ರಾಜ್ಯದ ಅಗತ್ಯತೆಯನ್ನು ವಿಚಾರಿಸಿದರು. ಇವತ್ತು ಜೆಮ್ಶೆಡ್ಪುರದಿಂದ ಆಮ್ಲಜನಕ ಬಂದಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಭೇಟಿಯಲ್ಲಿ ಯಾವುದೇ ವಿಶೇಷವಿಲ್ಲ. ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಅಗತ್ಯವಿರುವ ನೆರವು ನೀಡಲಾಗುವುದು. ರಾಜ್ಯದ ಕೋವಿಡ್ ಪರಿಸ್ಥಿತಿಯ ಕುರಿತು ಮಾಹಿತಿಯನ್ನು ಪಡೆದರು ಎಂದು ಯಡಿಯೂರಪ್ಪ ಹೇಳಿದರು.