<p><strong>ಬಾಗೇಪಲ್ಲಿ:</strong>ಪಟ್ಟಣದಲ್ಲಿ ನಡೆಯಲಿರುವ ಸಿಪಿಎಂ ರಾಜಕೀಯ ಸಮಾವೇಶದ ಪ್ರಯುಕ್ತ ಹಮ್ಮಿಕೊಂಡಿರುವರ್ಯಾಲಿಗೆ ಅಪಾರ ಸಂಖ್ಯೆಯಲ್ಲಿ ಸಿಪಿಎಂ ಕಾರ್ಯಕರ್ತರು ಸೇರುತ್ತಿದ್ದಾರೆ.</p>.<p>ಗೂಳೂರು ವೃತ್ತದಿಂದ ಕೆಎಚ್ಬಿ ಕಾಲೊನಿವರೆಗೆರ್ಯಾಲಿ ನಡೆಯಲಿದೆ.ಪಟ್ಟಣದ ಎಲ್ಲಿ ನೋಡಿದರೂ ಕೆಂಬಾವುಟಗಳು ರಾರಾಜಿಸುತ್ತಿವೆ. ರಾಜ್ಯ ಮಟ್ಟದ ಈ ಸಮಾವೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ಸಾಧ್ಯತೆ ಇದೆ.</p>.<p>ಪ್ರಮುಖವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗಿಯಾಗುತ್ತಿದ್ದಾರೆ. ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯರಾದ ಎಂ.ಎ.ಬೇಬಿ, ಬಿ.ವಿ.ರಾಘವುಲು, ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್ ಪ್ರಮುಖ ಭಾಷಣಕಾರರಾಗಿದ್ದಾರೆ.</p>.<p>ಮೆರವಣಿಗೆಯಲ್ಲಿ 500 ಮಂದಿ ತಮಟೆ ಕಲಾವಿದರು, 200 ನಾದಸ್ವರ, ಡೋಲುಗಳು, 500ಕ್ಕೂ ಹಚ್ಚು ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಕೆಂಪು ವಸ್ತ್ರಧಾರಿಗಳು ಕೆಂಬಾವುಟ ಹಿಡಿದು ಸಾಗುತ್ತಿದ್ದಾರೆ.</p>.<p>2023ರ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಕೆಯಾಗಿ ಸಿಪಿಎಂ ಈ ಸಮಾವೇಶ ಹಮ್ಮಿಕೊಂಡಿದೆ. ಸಮಾವೇಶದ ಹಿನ್ನೆಲೆಯಲ್ಲಿ ಈಗಾಗಲೇ ಸಿಪಿಎಂ ಪಕ್ಷವು ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲ್ಲೂಕಿನಲ್ಲಿ ಹಳ್ಳಿಗಳಲ್ಲಿ ಸಾಂಸ್ಕೃತಿಕ ಜಾಥಾ ನಡೆಸಿದೆ.</p>.<p><strong>ಕೆಂಬಾವುಟದ ಕ್ಷೇತ್ರ ಬಾಗೇಪಲ್ಲಿ:</strong>ರಾಜ್ಯದಲ್ಲಿ 1980ರ ದಶಕದಿಂದ ಇಲ್ಲಿಯವರೆಗೂ ಸಿಪಿಎಂನ ಕೆಂಬಾವುಟ ಗಟ್ಟಿಯಾಗಿ ನೆಲೆಯೂರಿರುವ ವಿಧಾನಸಭಾ ಕ್ಷೇತ್ರ ಎನ್ನುವ ಹೆಗ್ಗರುತು ಬಾಗೇಪಲ್ಲಿಗೆ ಇದೆ.</p>.<p>1952ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ 2018ರ ವಿಧಾನಸಭೆ ಚುನಾವಣೆವರೆಗೆ ಒಟ್ಟು ಮೂರು ಬಾರಿ ಈ ಕ್ಷೇತ್ರದಲ್ಲಿ ಸಿಪಿಎಂ ಗೆಲುವು ಸಾಧಿಸಿದೆ. ಎ.ವಿ.ಅಪ್ಪಸ್ವಾಮಿರೆಡ್ಡಿ ಒಮ್ಮೆ ಮತ್ತು ಜಿ.ವಿ. ಶ್ರೀರಾಮರೆಡ್ಡಿ ಎರಡು ಬಾರಿ ಸಿಪಿಎಂನಿಂದ ಇಲ್ಲಿ ಶಾಸಕರಾಗಿದ್ದರು.</p>.<p>ಈ ಎಲ್ಲ ದೃಷ್ಟಿಯಿಂದ ರಾಜ್ಯದಲ್ಲಿ ಇಂದಿಗೂ ಸಿಪಿಎಂಗೆ ಭದ್ರವಾದ ನೆಲೆ ಇರುವುದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ. ಈ ದೃಷ್ಟಿಯಿಂದ ಸಿಪಿಎಂ ಮುಖಂಡರು ಮತ್ತೆ ಕೆಂಬಾವುಟಕ್ಕೆ ಬಲ ತುಂಬಲು ಸಮಾವೇಶ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗೇಪಲ್ಲಿ:</strong>ಪಟ್ಟಣದಲ್ಲಿ ನಡೆಯಲಿರುವ ಸಿಪಿಎಂ ರಾಜಕೀಯ ಸಮಾವೇಶದ ಪ್ರಯುಕ್ತ ಹಮ್ಮಿಕೊಂಡಿರುವರ್ಯಾಲಿಗೆ ಅಪಾರ ಸಂಖ್ಯೆಯಲ್ಲಿ ಸಿಪಿಎಂ ಕಾರ್ಯಕರ್ತರು ಸೇರುತ್ತಿದ್ದಾರೆ.</p>.<p>ಗೂಳೂರು ವೃತ್ತದಿಂದ ಕೆಎಚ್ಬಿ ಕಾಲೊನಿವರೆಗೆರ್ಯಾಲಿ ನಡೆಯಲಿದೆ.ಪಟ್ಟಣದ ಎಲ್ಲಿ ನೋಡಿದರೂ ಕೆಂಬಾವುಟಗಳು ರಾರಾಜಿಸುತ್ತಿವೆ. ರಾಜ್ಯ ಮಟ್ಟದ ಈ ಸಮಾವೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ಸಾಧ್ಯತೆ ಇದೆ.</p>.<p>ಪ್ರಮುಖವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗಿಯಾಗುತ್ತಿದ್ದಾರೆ. ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯರಾದ ಎಂ.ಎ.ಬೇಬಿ, ಬಿ.ವಿ.ರಾಘವುಲು, ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್ ಪ್ರಮುಖ ಭಾಷಣಕಾರರಾಗಿದ್ದಾರೆ.</p>.<p>ಮೆರವಣಿಗೆಯಲ್ಲಿ 500 ಮಂದಿ ತಮಟೆ ಕಲಾವಿದರು, 200 ನಾದಸ್ವರ, ಡೋಲುಗಳು, 500ಕ್ಕೂ ಹಚ್ಚು ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಕೆಂಪು ವಸ್ತ್ರಧಾರಿಗಳು ಕೆಂಬಾವುಟ ಹಿಡಿದು ಸಾಗುತ್ತಿದ್ದಾರೆ.</p>.<p>2023ರ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಕೆಯಾಗಿ ಸಿಪಿಎಂ ಈ ಸಮಾವೇಶ ಹಮ್ಮಿಕೊಂಡಿದೆ. ಸಮಾವೇಶದ ಹಿನ್ನೆಲೆಯಲ್ಲಿ ಈಗಾಗಲೇ ಸಿಪಿಎಂ ಪಕ್ಷವು ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲ್ಲೂಕಿನಲ್ಲಿ ಹಳ್ಳಿಗಳಲ್ಲಿ ಸಾಂಸ್ಕೃತಿಕ ಜಾಥಾ ನಡೆಸಿದೆ.</p>.<p><strong>ಕೆಂಬಾವುಟದ ಕ್ಷೇತ್ರ ಬಾಗೇಪಲ್ಲಿ:</strong>ರಾಜ್ಯದಲ್ಲಿ 1980ರ ದಶಕದಿಂದ ಇಲ್ಲಿಯವರೆಗೂ ಸಿಪಿಎಂನ ಕೆಂಬಾವುಟ ಗಟ್ಟಿಯಾಗಿ ನೆಲೆಯೂರಿರುವ ವಿಧಾನಸಭಾ ಕ್ಷೇತ್ರ ಎನ್ನುವ ಹೆಗ್ಗರುತು ಬಾಗೇಪಲ್ಲಿಗೆ ಇದೆ.</p>.<p>1952ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ 2018ರ ವಿಧಾನಸಭೆ ಚುನಾವಣೆವರೆಗೆ ಒಟ್ಟು ಮೂರು ಬಾರಿ ಈ ಕ್ಷೇತ್ರದಲ್ಲಿ ಸಿಪಿಎಂ ಗೆಲುವು ಸಾಧಿಸಿದೆ. ಎ.ವಿ.ಅಪ್ಪಸ್ವಾಮಿರೆಡ್ಡಿ ಒಮ್ಮೆ ಮತ್ತು ಜಿ.ವಿ. ಶ್ರೀರಾಮರೆಡ್ಡಿ ಎರಡು ಬಾರಿ ಸಿಪಿಎಂನಿಂದ ಇಲ್ಲಿ ಶಾಸಕರಾಗಿದ್ದರು.</p>.<p>ಈ ಎಲ್ಲ ದೃಷ್ಟಿಯಿಂದ ರಾಜ್ಯದಲ್ಲಿ ಇಂದಿಗೂ ಸಿಪಿಎಂಗೆ ಭದ್ರವಾದ ನೆಲೆ ಇರುವುದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ. ಈ ದೃಷ್ಟಿಯಿಂದ ಸಿಪಿಎಂ ಮುಖಂಡರು ಮತ್ತೆ ಕೆಂಬಾವುಟಕ್ಕೆ ಬಲ ತುಂಬಲು ಸಮಾವೇಶ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>